Breaking News

ಪಪ್ಪಾಯ ಹಣ್ಣಿನಲ್ಲಿ ಮೂಡಿದ ಗಣೇಶಾಕೃತಿ – ರೈತ ಕುಟುಂಬದಲ್ಲಿ ಸಂತಸ

Spread the love

ಬಳ್ಳಾರಿ: ಗಣಪತಿ ಹಬ್ಬದ ಸಂದರ್ಭದಲ್ಲಿ ಪಪ್ಪಾಯಿ ಹಣ್ಣಿನಲ್ಲಿ ಗಣೇಶನ ರೂಪ ಕಂಡು ರೈತ ಕುಟುಂಬ ಅಚ್ಚರಿಗೊಂಡಿರುವ ಘಟನೆ ವಿಜಯನಗರ  ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡಗು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ರೈತ ಬಸವರಾಜ್ ಎನ್ನುವವರ ತೋಟದಲ್ಲಿನ ಪಪ್ಪಾಯದಲ್ಲಿ ಗಣೇಶಾಕೃತಿ ಕಂಡುಬಂದಿದೆ. ಸಹೋದರನಿಗೆ ಹಣ್ಣು ನೀಡಲು ರೈತ ಬಸವರಾಜ್ ಪಪ್ಪಾಯ ಕಿತ್ತು ತಂದಿದ್ದ. ಈ ವೇಳೆ ತಂದಿದ್ದ ಪಪ್ಪಾಯದಲ್ಲಿ ಗಣೇಶಾಕೃತಿ ಕಂಡುಬಂದಿದ್ದು, ಕುಟುಂಬಸ್ಥರು ಸಂತಸ ಪಟ್ಟಿದ್ದಾರೆ.

ಆನಂತರ ಪಪ್ಪಾಯಿಯನ್ನೇ ಗಣೇಶನ ರೂಪವೆಂದು ಭಾವಿಸಿದ ರೈತ ಕುಟುಂಬ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದೆ. ಹಲವು ವರ್ಷಗಳ ಬಳಿಕ ರೈತ ಬಸವರಾಜ್ ಪಾಲ್ತೂರ್ ಕುಟುಂಬದಲ್ಲಿ ಮತ್ತೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ