Breaking News

ಮರ ಬಿದ್ದು ಕಾಡಾನೆ ಮರಿಗೆ ಗಂಭೀರ ಗಾಯ – ಮರಿಯಾನೆ ಎಬ್ಬಿಸಲು ತಾಯಿಯಾನೆ ಪರದಾಟ

Spread the love

ಚಾಮರಾಜನಗರ: ಮರ ಉರುಳಿ ಬಿದ್ದು ಕಾಡಾನೆ ಮರಿ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ  ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ  ಹುಲಿ ಸಂರಕ್ಷಿತ ಅರಣ್ಯದ ಪುಣಜನೂರು ವಲಯದಲ್ಲಿ ನಡೆದಿದೆ.

ಮರಿಯಾನೆ ಮೇಲೆ ಬಿದ್ದಿದ್ದ ಮರವನ್ನು ಅರಣ್ಯ ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸಿದ್ದು, ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲು ಯತ್ನಿಸುತ್ತಿದ್ದಾರೆ. ಆದರೆ ತಾಯಿಯಾನೆ ಮರಿಯಾನೆಯನ್ನು ಬಿಟ್ಟು ಕದಲದ ಕಾರಣ ಚಿಕಿತ್ಸೆ ನೀಡಲು ಕಷ್ಟವಾಗಿದೆ.

ತಾಯಿಯಾನೆಯನ್ನು ಎಷ್ಟೇ ಓಡಿಸಲು ಪ್ರಯತ್ನಪಟ್ಟರೂ ಕೂಡ ಪ್ರಯೋಜನವಾಗಲಿಲ್ಲ. ಇತ್ತ ಮರಿಯಾನೆ ಎದ್ದೇಳಲು ಸಾಧ್ಯವಾಗದೇ ಒದ್ದಾಟ ನಡೆಸಿದ್ದು, ಜೆಸಿಬಿ ಮೂಲಕ ಮರಿಯಾನೆಯನ್ನು ಎತ್ತಲು ಅರಣ್ಯ ಸಿಬ್ಬಂದಿ ಚಿಂತಿಸಿದ್ದು, ತಾಯಿಯಾನೆ ಜಾಗದಿಂದ ಹೋಗದ ಕಾರಣ ಚಿಕಿತ್ಸೆಗೆ ತೊಡಕಾಗಿದೆ.

ಮರಿಯಾನೆ ಮೇಲೆ ಮರ ಬಿದ್ದಿದ್ದು ಹೇಗೆ? ಎನ್ನುವ ಬಗ್ಗೆ ತಿಳಿದುಬಂದಿಲ್ಲ.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ