ಬೆಳಗಾವಿಯಲ್ಲಿ ಇಂದಿನಿಂದ ಆರ್ಎಸ್ಎಸ್ ಪ್ರಮುಖ ವಾರ್ಷಿಕ ಸಭೆ ಆರಂಭಗೊಂಡಿದ್ದು, ಈ ಸಭೆಯ ಮುಕ್ತಾಯದ ನಂತರ ರಾಜ್ಯದಲ್ಲಿ ಅನಾಹುತಗಳು ಅಥವಾ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಂಘಟನೆಯು ಈ ಬಾರಿ ಬೆಳಗಾವಿಯನ್ನೇ ಗುರಿಯಾಗಿಸಿಕೊಂಡು ಸಭೆ ನಡೆಸುತ್ತಿರುವುದರ ಉದ್ದೇಶ ಏನೆಂಬುದು ತಿಳಿಯುತ್ತಿಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಹಿಂದೆಲ್ಲಾ ಇವರ ಪ್ರಮುಖ ಸಭೆಗಳು ಮುಗಿದ ತಕ್ಷಣ ಸಮಾಜದಲ್ಲಿ ಶಾಂತಿ ಕದಡುವಂತಹ ಅನಾಹುತಗಳು ಅಥವಾ ಗಲಭೆಗಳು ನಡೆದಿರುವ ಉದಾಹರಣೆಗಳಿವೆ. ಅದೇ ರೀತಿ, ಈಗಿನ ಬೆಳಗಾವಿ ಸಭೆಯ ಬಳಿಕ ರಾಜ್ಯದಲ್ಲಿ ಮತ್ತೇನು ಕಾದಿದೆಯೋ ಎಂಬ ಆತಂಕ ಸೃಷ್ಟಿಯಾಗಿದೆ. ಏನಾಗಲಿದೆ ಎಂಬುದನ್ನು ನಾವೀಗ ಕಾದು ನೋಡಬೇಕಿದೆ” ಎಂದು ಹೇಳಿದ್ದಾರೆ.
Laxmi News 24×7