Breaking News

ಬೆಳಗಾವಿ : ಆರು ವರ್ಷಗಳಿಂದ ಕಾಣೆಯಾದಾತ ಗುಜರಾತನಲ್ಲಿ ಪತ್ತೆ

Spread the love

ಬೆಳಗಾವಿ : ಆರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರಾಯಬಾಗ ತಾಲೂಕಿನ ಹಾರೂಗೇರಿ ಹಿರೇಹಳ್ಳ ತೋಟದ ಅಬ್ದುಲ್‌ಗಣಿ ಗೌಸ್ ಪೆಂಡಾರಿ(41)ಯನ್ನು ಹಾರೂಗೇರಿ ಠಾಣೆ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಜರಾತ ರಾಜ್ಯದಲ್ಲಿ ಪತ್ತೆ ಮಾಡಿದ್ದಾರೆ.
ಪೆಂಡಾರಿ, 2020ರ ಜ.19ರಂದು ಯಾರಿಗೂ ಹೇಳದೇ ಮನೆಬಿಟ್ಟು ಹೋಗಿದ್ದನು. ಈ ಬಗ್ಗೆ ಅದೇ ವರ್ಷದ ಮಾ. 18ರಂದು ಪತ್ನಿ ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಲ್ಲ ಕಡೆ ಹುಡುಕಾಡಿದರೂ ಆತ ಸಿಗದಿದ್ದಾಗ, ನಾಪತ್ತೆ ಪ್ರಕರಣವೆಂದು ಪರಿಗಣಿಸಿ ಅಷ್ಟಕ್ಕೆ ಬಿಡಲಾಗಿತ್ತು. ಈಚೆಗೆ ಪೊಲೀಸ್ ಇಲಾಖೆಗೆ ಲಭ್ಯವಾಗಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆತನನ್ನು ಗುಜರಾತ ರಾಜ್ಯದ ಆನಂದ ನಗರದಲ್ಲಿ ಪತ್ತೆ ಮಾಡಿದ್ದಾರೆ.
ಈತನ ಸುಳಿವು ಸಿಕ್ಕ ತಕ್ಷಣ ಹಾರೂಗೇರಿ ಪಿಎಸ್‌ಐ ಮಾಳಪ್ಪ ಪೂಜಾರಿ ನೇತೃತ್ವದಲ್ಲಿ ಆನಂದ ನಗರಕ್ಕೆ ತೆರಳಿದ ಸಿಬ್ಬಂದಿ ಎಸ್.ಎ. ಬೇವನೂರ, ಪೆಂಡಾರಿಯನ್ನು ಸ್ಥಳೀಯ ಠಾಣೆಗೆ ಕರೆಯಿಸಿ, ವಿಚಾರಿಸಿದಾಗ ತಾನು ಪತ್ನಿ ಜತೆಗಿನ ಮನಸ್ತಾಪದಿಂದ ಮನೆ ಬಿಟ್ಟು ಬಂದಿರುವುದಾಗಿ ಹೇಳಿದ್ದಾನೆ.

Spread the love

About Laxminews 24x7

Check Also

ಕನಿಷ್ಠ ವೇತನ ಹೆಚ್ಚುವರಿ ಆದೇಶ ವಾಪಸ್ಸು ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Spread the loveಬೆಳಗಾವಿ : ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ನಗರದಲ್ಲಿ  ವಿವಿಧ ವ್ಯಾಪಾರ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ