Breaking News

ಸ್ಮಶಾನಕ್ಕೆ ಹೋಗಲು ಅಡ್ಡಿ; ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ

Spread the love

ರಾಮದುರ್ಗ: ತಾಲ್ಲೂಕಿನ ಲಿಂಗದಾಳ ಗ್ರಾಮದ ದಲಿತರಿಗೆ ಸ್ಮಶಾನ ಇದ್ದರೂ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದೇ ಸಮಸ್ಯೆಯಿಂದ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ಸಹಜ ಸ್ಥಿತಿಗೆ ಮರಳಿದೆ.

ಲಿಂಗದಾಳ ಗ್ರಾಮದ ದಲಿತ ವ್ಯಕ್ತಿಯೊಬ್ಬರು ಶುಕ್ರವಾರ ನಿಧನರಾಗಿದ್ದರು. ಶನಿವಾರ ಶವಸಂಸ್ಕಾರಕ್ಕೆಂದು ಕೇರಿಯ ಜನ ಖಾಸಗಿಯವರ ಹೊಲದೊಳಗಿಂದ ದಾಟಿ ಹೋಗುವಾಗ ಹೊಲದ ಮಾಲೀಕರು ತಕರಾರು ಮಾಡಿದ್ದರು.

ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, ಪೊಲೀಸರು ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಸ್ಮಶಾನಕ್ಕೆ ಹೋಗಲು ವಹಿವಾಟಿನ ದಾರಿ ಮಾತ್ರ ಇದೆ. ಹೊಲದ ಮಾಲೀಕರು ಒಪ್ಪಿಗೆ ಸೂಚಿಸಿದರೆ ಮಾತ್ರ ಹೋಗಬಹುದು. ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲ ಎಂದು ಹೊಲದ ಮಾಲೀಕರು ತಕರಾರು ಮಾಡಿದ್ದರು.

ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಸಿಪಿಐ ವಿನಾಯಕ ಬಡಿಗೇರ ಅವರ ಸಮಯ ಪ್ರಜ್ಞೆಯಿಂದ ಗ್ರಾಮದಲ್ಲಿ ಉಂಟಾಗಬಹುದಿದ್ದ ಸಮಸ್ಯೆನ್ನು ಸಲೀಸಾಗಿ ತಿಳಿಗೊಳಿಸಿದರು.

ಲಿಂಗದಾಳ ಗ್ರಾಮದ ಪರಿಶಿಷ್ಟರಿಗೆ ಸ್ಮಶಾನದ ಸಮಸ್ಯೆ ಇಲ್ಲ. ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ. ಅಲ್ಲಿ ವಹಿವಾಟಿನ ದಾರಿ ಮಾತ್ರ ಇದೆ. ಅಲ್ಲಿಂದ ಹೋಗಲು ಮಾಲೀಕರನ್ನು ಪರಿಶಿಷ್ಟರು ಕೇಳಿಲ್ಲ. ಅದಕ್ಕಾಗಿ ಸಮಸ್ಯೆ ಎದುರಾಗಿತ್ತು. ಎರಡೂ ಗುಂಪಿನವರು ರಾಮದುರ್ಗಕ್ಕೆ ಕರೆಯಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.

ಸ್ಮಶಾನ ಮತ್ತು ಸ್ಮಶಾನದ ದಾರಿ ಒದಗಿಕೊಡಬೇಕಿರುವುದು ತಾಲ್ಲೂಕು ದಂಡಾಧಿಕಾರಿಗಳು. ಎರಡೂ ಹೊಲಗಳಲ್ಲಿ ಒಂದಿಷ್ಟು ಜಮೀನು ಪಡೆದು ರೈತರಿಗೆ ಪರಿಹಾರ ನೀಡಬೇಕು. ಅಂದಾಗ ದಾರಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.


Spread the love

About Laxminews 24x7

Check Also

ಮರಾಠಾ ಅಭಿವೃದ್ಧಿ ನಿಗಮಕ್ಕೆ ಸಾವಿರ ಕೋಟಿ ರೂ.ಅನುದಾನ ನೀಡಿ: ಕಿರಣ್ ಜಾಧವ್ ಆಗ್ರಹ

Spread the loveಬೆಳಗಾವಿ : ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮರಾಠಾ ಸಮಯದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ