Breaking News

ಸವದತ್ತಿ ಜಾತ್ರೆಗೆ ಹೋದ ಮಗ ಕಾಣೆ : ಊಟ ಬಿಟ್ಟು ಮಗನಿಗಾಗಿ ಕಾಯುತ್ತಿರುವ ತಾಯಿ ಹೃದಯ…!

Spread the love

ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಹೋಗಿ ವಾಪಸ್ ಮನೆಗೆ ಬರದೆ ಮಗ ಕಾಣೆಯಾಗಿದ್ದು ಇತ್ತ ಹೆತ್ತ ಕರುಳು ಮಗನಿಗಾಗಿ ಊಟ ಬಿಟ್ಟು ನಿದ್ರೆ ಮಾಡದೆ ಕಾಯುತ್ತಿರುವ ಘಟನೆ ಮನಕಲಕುವಂತಿದೆ.

ಜಿಲ್ಲೆಯ ಗೋಕಾಕ್ ತಾಲೂಕಿನ ಲಘುಮೇಶ್ವರ ಗ್ರಾಮದ ಲಕ್ಕಪ್ಪ ಭೀಮಪ್ಪ ಕೊಪ್ಪದ (40) ಕಾಣೆಯಾದ ವ್ಯಕ್ತಿ. ಈತನಿಗೆ ಮಾತನಾಡಲು ಬರುವುದಿಲ್ಲ. ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರೆಗೆ ಹೋಗಿದ್ದು ಈವರೆಗೂ ಮರಳಿ‌ ಮನೆಗೆ ಬಂದಿಲ್ಲ.

ಮಗ ಮನೆಗೆ ಬರದ ಹಿನ್ನಲೆಯಲ್ಲಿ ಕಳೆದ ಏಳೆಂಟು ದಿನಗಳಿಂದ ಆತನ ತಾಯಿ ಊಟ ಮಾಡದೆ ಮಗನಿಗಾಗಿ ಕಾಯುತ್ತಾ ಕೂತಿದ್ದಾಳೆ.‌ ಹೆತ್ತ ಕರಳು ಮಗನ ಬರುವಿಕೆಗಾಗಿ ದಿನ‌ ಕಳೆಯುತ್ತಿದೆ.

ಕಾಣೆಯಾದ ಲಕ್ಕಪ್ಪ ಭೀಮಪ್ಪ ಕೊಪ್ಪದನಿಗೆ ಮಾತನಾಡಲು ಬರುವುದಿಲ್ಲ. ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.‌ ಈತ ಪತ್ತೆಯಾದರೆ – 9844649927 ಸಂಖ್ಯೆಗೆ ಮಾಹಿತಿ ನೀಡಲು ಕುಟುಂಬದವರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ: ಸಿಜೆಐ

Spread the loveನವದೆಹಲಿ: ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಅವರಲ್ಲಿ ಸೋಷಿಯಲ್‌ ಮೀಡಿಯಾ ಬಳಕೆದಾರರು, ಆರ್‌ಟಿಐ ಕಾರ್ಯಕರ್ತರು ಇರುತ್ತಾರೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ