ದಾವಣಗೆರೆ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ಗಂಡನಿಗೆ ಇಲ್ಲಿನ ನ್ಯಾಯಾಲಯ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ರೊಳ್ಳಿ ಪರಮೇಶ್ವರಪ್ಪ (51) ಶಿಕ್ಷೆಗೆ ಒಳಗಾದವ. ವೇದಾವತಿ ಹಲ್ಲೆಗೆ ಒಳಗಾದವರು.
ಸೆಪ್ಟಂಬರ್ 2, 2024ರಲ್ಲಿ ನಡೆದ ಪ್ರಕರಣವಿದು. ಪೊಲೀಸರು ತನಿಖೆ ನಡೆಸಿ ದಾವಣಗೆರೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪತಿ ತನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವುದಾಗಿ ವೇದಾವತಿ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಹರಿಹರ ತಾಲೂಕಿನ ಮಲೇಬೆನ್ನೂರಿನ ಬಸವೇಶ್ವರ ಬಡಾವಣೆ ನಿವಾಸಿಯಾದ ನಾನು, ಮಲೇಬೆನ್ನೂರಿನ ನಿಟ್ಟೂರು ರಸ್ತೆಯಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದೆ. ನನ್ನ ಪತಿ ಪರಮೇಶ್ವರಪ್ಪ ಈ ಹಿಂದೆ ಯಲವಟ್ಟಿ ಗ್ರಾಮದ ಓರ್ವ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲಿಗೆ ಹೋಗಿದ್ದ. ಈ ವೇಳೆ ನಾನು ಹೈಕೋರ್ಟ್ಗೆ ಹೋಗಿ ಜಾಮೀನಿನ ಮೇಲೆ ಅವನನ್ನು ಬಿಡಿಸಿಕೊಂಡು ಬಂದಿದ್ದೆ. ಆದರೆ, ನನ್ನ ಮೇಲೆ ಸಂಶಯಪಡುತ್ತಿದ್ದ. ಆಗಾಗ ಜಗಳ ಮಾಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ನೀನು ಮರೆತಿದ್ದೀಯಾ ಅಂತ ಕಬ್ಬಿಣದ ರಾಡ್ ನಿಂದ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ವೇದಾವತಿ ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಪಿಸ್ಐ ಪ್ರಭು.ಡಿ.ಕೆಳಗಿನಮನಿ ಅವರು ತನಿಖೆ ಕೈಗೊಂಡಿದ್ದರು. ನಿನ್ನ ಜೀವ ತೆಗೆಯದೆ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿರುವುದು ತನಿಖೆಯಿಂದ, ಸಾಕ್ಷಿದಾರರ ಹೇಳಿಕೆಗಳಿಂದ ಹಾಗೂ ಇತರೆ ದಾಖಲಾತಿಗಳಿಂದ ದೃಢಪಟ್ಟಿತ್ತು.
Laxmi News 24×7