Breaking News

ಮಹಾಕುಂಭಕ್ಕೆ ಕರೆದೊಯ್ದು ಪತ್ನಿಯ ಕೊಂದು, ಮಕ್ಕಳ ಬಳಿ ನಿಮ್ಮಮ್ಮ ಕಳೆದುಹೋದ್ಲು ಎಂದಿದ್ದ ವ್ಯಕ್ತಿ,

Spread the love

ಪ್ರಯಾಗ್​ರಾಜ್​, ಫೆಬ್ರವರಿ 24: ಮಹಾಕುಂಭಮೇಳಕ್ಕೆಂದು ವ್ಯಕ್ತಿಯೊಬ್ಬ ಪತ್ನಿಯನ್ನು ಕರೆದೊಯ್ದು,  ಕೊಲೆ ಮಾಡಿ, ಮಕ್ಕಳ ಬಳಿ ನಿಮ್ಮ ಅಮ್ಮ ಕಳೆದುಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳ ಅಂತಿಮ ಘಟ್ಟಕ್ಕೆ ತಲುಪಿದೆ. ಶಿವರಾತ್ರಿಯಂದು ಕೊನೆಗೊಳ್ಳಲಿದ್ದು ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.

ದೆಹಲಿಯ ವ್ಯಕ್ತಿ ತನ್ನ ಪತ್ನಿಯೊಂದಿಗೆ ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಲು  ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದರು.  ಅಶೋಕ್ ಬಾಲ್ಮಿಕಿ ತ್ರಿವೇಣಿ ಸಂಗಮದಲ್ಲಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು.

ರಾತ್ರಿಯ ಹೊತ್ತಿಗೆ, ದಂಪತಿ ಒಂದು ಲಾಡ್ಜ್‌ಗೆ ಹೋದರು ಮತ್ತು ಅಶೋಕ್ ತನ್ನ ಪತ್ನಿ ಮೀನಾಕ್ಷಿಗೆ ಮರುದಿನ ಬೆಳಗ್ಗೆ ಆಕೆಯನ್ನು ಪವಿತ್ರ ಸ್ನಾನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಮರುದಿನ, ಮೀನಾಕ್ಷಿಯ ರಕ್ತಸಿಕ್ತ ದೇಹವು ಅವರ ಕೋಣೆಯಲ್ಲಿ ಕಂಡುಬಂದಿತ್ತು ಮತ್ತು ಅಶೋಕ್ ಎಲ್ಲಿಯೂ ಕಾಣಲಿಲ್ಲ. ಈ ಮಧ್ಯೆ, ಮೀನಾಕ್ಷಿ ಮಹಾ ಕುಂಭಮೇಳದಲ್ಲಿ ಕಳೆದುಹೋದಳು ಎಂದು ಆತ ಮಕ್ಕಳ ಬಳಿ ಹೇಳಿದ್ದ ವಿಚಾರ ಬಹಿರಂಗಗೊಂಡಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ