ಗಡಿಯಲ್ಲಿ ಕನ್ನಡ ಶಾಲೆ ಗಟ್ಟಿಗೊಳಿಸಿದಾಗ ಗಡಿಯಲ್ಲಿ ಕನ್ನಡ ನೆಲೆಯೂರಲಿದೆ; ರಾಹುಲ್ ಜಾರಕಿಹೊಳಿ
ಕಾಕತಿಯಲ್ಲಿ ಕನ್ನಡದ ಕಂಪು ಸೂಸಿದ 10ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ…
ಕಾಕತಿಯಲ್ಲಿ 10ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ…
ಕಣ್ಮನ ಸೆಳೆದ ಕನ್ನಡಾಂಬೆಯ ಮೆರವಣಿಗೆವಿವಿಧ ಗಣ್ಯರು ಭಾಗಿವಿವಿಧ ಕಾರ್ಯಕ್ರಮಗಳ ಆಯೋಜನೆ
ಸಚಿವ ಸತೀಶ್ ಜಾರಕಿಹೊಳಿ ಅವರು ಕನ್ನಡ ಸಾಹಿತ್ಯ ಎಲ್ಲಾ ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಕನ್ನಡಾಭಿಮಾನವೇ ಈ ಕಾರ್ಯಕ್ರಮಕ್ಕೇ ಬಲ ಬಂದತ್ತಾಗಿದೆ. ಗಡಿಯಲ್ಲಿ ಕನ್ನಡ ಶಾಲೆ ಗಟ್ಟಿಗೊಳಿಸಿದಾಗ ಗಡಿಯಲ್ಲಿ ಕನ್ನಡ ನೆಲೆಯೂರಲಿದೆ ಎಂದು ಯುವ ಮುಖಂಡ ರಾಹುಲ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ತಾಲೂಕಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ತಾಲೂಕಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಡಗರದಿಂದ ನಡೆಯಿತು. ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.ಮೊದಲಿಗೆ ಕಾಕತಿಯ ಪೊಲೀಸ್ ಠಾಣೆಯಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದ ವರೆಗೂ ‘ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮ ಮೆರವಣಿಗೆ ನಡೆಯಿತು. ಬೃಹತ್ ಉದ್ದನೆಯ ಕನ್ನಡ ಧ್ವಜದ ಮೆರವಣಿಗೆ, ಕೋಲಾಟ, ನಾಡದೇವಿ ಭುವನೇಶ್ವರಿಯ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
ಸಮ್ಮೇಳನದ ಸಾನಿಧ್ಯವನ್ನು ವಹಿಸಿ ಮುಕ್ತಿಮಠದ ಸ್ವಾಮಿಜೀಗಳ ಆರ್ಶೀವಚನ ನೀಡಿದರು. ಬೈಟ್
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರು ಸಚಿವ ಸತೀಶ್ ಜಾರಕಿಹೊಳಿ ಅವರು ಕನ್ನಡ ಸಾಹಿತ್ಯ ಎಲ್ಲಾ ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಕನ್ನಡಾಭಿಮಾನವೇ ಈ ಕಾರ್ಯಕ್ರಮಕ್ಕೇ ಬಲ ಬಂದತ್ತಾಗಿದೆ. ಗಡಿಯಲ್ಲಿ ಕನ್ನಡ ಶಾಲೆ ಗಟ್ಟಿಗೊಳಿಸಿದಾಗ ಗಡಿಯಲ್ಲಿ ಕನ್ನಡ ನೆಲೆಯೂರಲಿದೆ ಎಂದರು.
Laxmi News 24×7