ಬೆಳಗಾವಿ: ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರುನಮ್ಮ ಮೂರ್ನಾಲ್ಕು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳುಗಳಿಂದ ಮೈಕ್ರೋ ಪೈನಾನ್ಸ್ ಗೊಂದಲ ಸೃಷ್ಠಿಯಾಗಿದೆ.ಸುಮಾರು ಹದಿನೈದು ಸಾವಿರ ಜನಕ್ಕೆ ಜನರಿಗೆ ಗೊತ್ತಿಲ್ಲದೆ ಲೋನ್ ಕೊಟ್ಟಿದ್ದಾರೆ.
ಅದು ಸಬ್ಸಿಡಿ ಹಣ ಅಂತಾ ಕೊಟ್ಟಿದ್ದಾರೆ ಅದು ಸಬ್ಸಿಡಿ ಹಣ ಅಲ್ಲಾ ಲೋನ್ ಹಣ ಅದು.ನಾಲ್ಕೈದು ಜನ ಮಹಿಳೆಯರೆ ಇದರ ಬಗ್ಗೆ ನೇತೃತ್ವ ವಹಿಸಿದ್ದಾರೆ.ಈ ವಿಚಾರ ಕುರಿತು ಈಗಾಗಲೇ ಒಬ್ಬರನ್ನ ಅರೆಸ್ಟ್ ಮಾಡಿದ್ದೇವೆ ಇನ್ನು ಇಬ್ಬರ ಬಗ್ಗೆ ತನಿಖೆ ಮಾಡಲಿಕೆ ಹೇಳಿದ್ದೇವೆ.
ಪೊಲೀಸ್ ಅಧಿಕಾರಿಗಳನ್ನ ನೇಮಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ದುಡ್ಡು ಮೂರನೇ ವ್ಯಕ್ತಿಗೆ ಹೇಗೆ ಹೋಗಿದೆ ಎಂದು ಪ್ರಶ್ನೆ ಬಂದಿದೆ ಇಲ್ಲಿ.ಅವರ ಅಕೌಂಟಗೆ ಬಂದ ದುಡ್ಡು ಮೂರನೇ ವ್ಯಕ್ತಿಗೆ ಹೋಗಿದೆ. ಈಗಾಗಲೇ ಪೈನಾನ್ಸದವರಿಗೆ ಮಹಿಳೆಯರಿಗೆ ತೊಂದರೆ ಕೊಡದಂತೆ ಡಿಸಿ ಮತ್ತು ನಾವು ಸೂಚನೆ ಕೊಟ್ಟಿದ್ದೇವೆ.
ಹದಿನೈದು ಸಾವಿರ ಮಂದಿಗೆ 40 ಪೈನಾನ್ಸದವರು ಕೂಡಿ ಹಣ ಕೊಟ್ಟಿದ್ದಾರೆ.ಅಂದಾಜು ನೂರು ಕೋಟಿ ಮೇಲೆ ಆಗಿದೆ ಇದರಲ್ಲಿ ಖಂಡಿತ ಮೋಸ ಆಗಿದೆ.ಯಾರ ಮಾಡಿದ್ದಾರೆ ಎಂದು ಕಂಡು ಹಿಡಿಯಬೇಕಿದೆ. ಸಬ್ಸಿಡಿ ಹಣ ಬರುತ್ತೆ ಎಂದು ಮಹಿಳೆಯರು ಸಹಿ ಮಾಡಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ಫಸ್ಟ್ ಟೈಮ್ ಆಗಿದೆ.
ಪ್ರಿಯಾಂಕಾ ಖರ್ಗೆ ರಾಜಿನಾಮೇ ಬಿಜೆಪಿ ಪೋಸ್ಟರ್ ವಾರ್ ಪ್ರತಿಭಟನೆ ವಿಚಾರ ಉತ್ತರಿಸಿದ ಅವರು ಮಾಡೇ ಮಾಡುತ್ತಾರೆ ಅವರು ಅದರಲ್ಲಿ ಎಷ್ಟು ಸತ್ಯಾಂಶ ಇದೆ ಹೊರಗೆ ಬರಬೇಕು. ತನಿಖೆ ಆಗಲಿ ಸತ್ಯಾಂಶ ಹೊರಬರಲಿ ಆ ಮೇಲೆ ನೋಡೊಣ ಪೊಲೀಸರು ತನಿಖೆ ಮಾಡುತ್ತಾರೆ ಎಂದ ಸಚಿವ. ಸತಿಶ್ ಜಾರಕಿಹೋಳಿ ತಿಳಿಸಿದರು.