Breaking News

ಹುಲಿಯಂತೆ ಘರ್ಜಿಸುತ್ತೇನೆ ಎಂದಿದ್ದ ಲಕ್ಷ್ಮೀ ಈಗ ತಣ್ಣಗಾಗಿದ್ದಾರೆ

Spread the love

ಬೆಳಗಾವಿ: ಹುಲಿ, ಸಿಂಹದ ರೀತಿಯಲ್ಲಿ ಗುಡುಗುತ್ತೇವೆ ಎಂದಿದ್ದ ಲಕ್ಷ್ಮೀ ಹೆಬ್ಬಾಳಕರ ಈಗ ಮಂತ್ರಿ ಆದ ಮೇಲೆ ತಣ್ಣಗಾಗಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳಕರ ಅವರು ನಮಗೆ ಸಿಎಂ ಭೇಟಿ ಮಾಡಿಸಿಲ್ಲ.

ಸ್ಪೀಕರ್‌ಗೆ ಮನವಿ ಮಾಡಿದ್ದಾಗಿ ಶಾಸಕರು ಹೇಳಿದ್ದರು. ಅಲ್ಲಿ ಹೋಗಿ ಕೇಳಿದರೆ ಯಾರೂ ನಿಮ್ಮವರು ಬಂದಿಲ್ಲ ಎಂದು ಸ್ಪೀಕರ್‌ ಹೇಳಿದರು. ಇದರಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು. ಈ ಹಿಂದೆ ಹೇಗೆ ಮೈ ಚಳಿ ಬಿಟ್ಟು ಮಾತನಾಡುತ್ತಿದ್ದ ಹೆಬ್ಬಾಳಕರ ಈಗ ಸಚಿವರಾಗಿರುವ ಕಾರಣಕ್ಕೆ ಮಾತನಾಡಲು ಮುಜುಗರ ಆಗಬಹುದು. ಅವರದ್ದದೇ ಸರ್ಕಾರ ಇರುವ ಕಾರಣ ತೊಂದರೆ ಆಗಬಹುದು ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ