Breaking News

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ದೂಧ್‌ಸಾಗರ್‌

Spread the love

ಹೊಸದಿಲ್ಲಿ: ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳನ್ನು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಪಟ್ಟಿ ಮಾಡಿದ್ದು, ಅದರಲ್ಲಿ ಕರ್ನಾಟಕದ ದೂಧ್‌ಸಾಗರ್‌ ಕೂಡ ಒಂದು ಎಂಬುದು ವಿಶೇಷ.

ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್‌ಸಾಗರ ಜಲಪಾತ ಈ ಎರಡೂ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ.

ದೂಧ್‌ಸಾಗರ ಜಲಪಾತದ ಎದುರು ರೈಲು ಹಾದು ಹೋಗುವಾಗ ಮನಮೋಹಕ ದೃಶ್ಯ ಪ್ರಯಾಣಿಕರ ಕಣ್ಮನ ಸೆಳೆಯುತ್ತದೆ. ಈ ರೈಲು ಮಾರ್ಗ ಸೇರಿದಂತೆ ರೈಲ್ವೇ ಸಚಿವರು 6 ರೈಲು ಮಾರ್ಗಗಳನ್ನು ಪಟ್ಟಿ ಮಾಡಿದ್ದಾರೆ.

ಇದರಲ್ಲಿ ಗುಜರಾತ್‌ನ ಕಛ್‌ ಜಿಲ್ಲೆಯ ರಣ್‌ ಜವುಗು ಪ್ರದೇಶದಲ್ಲಿ ಹಾದು ಹೋಗುವ ನಮೋ ಭಾರತ್‌ ರ್ಯಾಪಿಡ್‌ ರೈಲು, ನೀಲಗಿರಿ ಪರ್ವತದಲ್ಲಿ ಹಾದುಹೋಗುವ ರೈಲುಗಳು, ಜಮ್ಮು-ಕಾಶ್ಮೀರದ ಬನಿಹಾಲ್‌ ಹಾಗೂ ಬಡ್ಗಾಮ್‌ ನಡುವಿನ ರೈಲು ಮಾರ್ಗ, ಕೇರಳ ಕರಾವಳಿಯಲ್ಲಿರುವ ಕಪ್ಪಿಲ್‌ ರೈಲು ಮಾರ್ಗ, ಹಿಮಾಲಯ ತಪ್ಪಲಿನ ಶಿಮ್ಲಾದಿಂದ ಕಲ್ಕಾಗೆ ತೆರಳುವ ಆಟಿಕೆ ರೈಲು ಮಾರ್ಗಗಳೂ ಸೇರಿವೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ