ಬೈಲಹೊಂಗಲ: ‘ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮತ್ತೊಬ್ಬರ ಪ್ರಯತ್ನದ ದಾರಿಗೆ ವಿಧಾಯಕ ಕಾರ್ಯಗಳು ಮಾಡಲು ಸಹಕಾರಿಯಾಗಲು ಸಾಧ್ಯವಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕ ವತಿಯಿಂದ ಶನಿವಾರ ನಡೆದ ಪ್ರತಿಭಾವಂತ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು
‘ದೇಶದಲ್ಲಿ ವಿದ್ಯಾರ್ಜನೆ ಮಾಡಿದ ಪ್ರತಿಭಾವಂತರು ಇಲ್ಲಿಯೇ ತಮ್ಮ ಕೌಶಲವನ್ನು ಸದ್ಬಳಕೆ ಮಾಡಿದರೆ ರಾಷ್ಟ್ರ ಉನ್ನತೀಕರಣವಾಗಲಿದ್ದು, ಸಾಧಕರಿಗೆ ಪ್ರತಿಯೊಬ್ಬರು ಅವಕಾಶ ನೀಡುವದು ಅತ್ಯವಶ್ಯವಾಗಿದೆ’ ಎಂದರು.
ಮುಖ್ಯ ಅಥಿತಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ‘ಪಾಲಕರು ಮಕ್ಕಳ ಮೇಲೆ ಮೇಲೆ ಒತ್ತಡ ಹೇರಬೇಡಿ. ಅವರ ಇಚ್ಚೆಯ ಅನುಸಾರ ಸ್ವತಂತ್ರವಾಗಿ ಅಧ್ಯಯನ ಮಾಡಲು ಪ್ರೇರೇಪಣೆ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿ ಬದುಕಿನಲ್ಲಿ ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ. ಮತ್ತೂಬ್ಬರನ್ನು ಅನುಕರಣೆ ಮಾಡಿ ಮಕ್ಕಳನ್ನು ಬಲಿಪಶು ಮಾಡದಿರಿ’ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ತಹಶೀಲ್ದಾರ್ ಹಣಮಂತ ಶಿರಹಟ್ಟಿ, ಚಿತ್ರನಟ ಶಿವರಂಜನ ಬೋಳಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಯುವ ಧುರೀಣ ನಾನಾಸಾಹೇಬ ಪಾಟೀಲ, ಸಂಘಟನೆಯ ಕಾರ್ಯದರ್ಶಿ ಸಿ.ಎಸ್.ಭಜಂತ್ರಿ, ಡಾ.ವಿರೇಂದ್ರ ಹಡಪದ, ಕ.ರಾ.ಸ.ನೌ.ಸಂಘದ ಸವದತ್ತಿ ಅಧ್ಯಕ್ಷ ಆನಂದ ಮೂಗಬಸವ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಬಿ.ಎಸ್. ಫಕ್ಕೀರಸ್ವಾಮಿಮಠ, ಡಿ.ಎಂ. ಮಿರ್ಜನ್ನವರ, ಆಯ್.ಎಪ್.ತಿಗಡಿ, ಬಿ.ಡಿ.ತಮ್ಮಣ್ಣವರ, ಮಿನಾಕ್ಷಿ ಸುತಗಟ್ಟಿ, ಎಸ್.ಡಿ.ಗಂಗಣ್ಣವರ, ಎಸ್.ಪಿ.ಮತ್ತಿಕೊಪ್ಪ, ಸಿ.ವಾಯ್.ಹಾದಿಮನಿ, ವಿರೇಶ ಕುಬಸದ ಇದ್ದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಸದಸ್ಯರು, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು. ರಮೇಶಗೌಡ ದೊಡ್ಡಗೌಡ್ರ ಸ್ವಾಗತಿಸಿದರು. ಪರಶುರಾಮ ಸೊಂಟಕ್ಕಿ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಕ್ಷಕಿ ಕಲಾವತಿ ದೇಶನೂರ ವಂದಿಸಿದರು.