Breaking News

ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Spread the love

ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಾಗಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಆರ್ಥಿಕ ಸ್ಥಿತಿ ಅಯೋಮಯಾಗಿದೆ. ರಾಜ್ಯದ ಬರಗಾಲ ನಿವಾರಣೆಗೆ ಸಭೆ ಮಾಡಿದರಷ್ಟೇ ಸಾಲದು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು, ಆಗ ಬದುಕಿಗೆ ಹತ್ತಿರವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

 

ರಾಣೇಬೆನ್ನೂರು ತಾಲೂಕು ಮಾಕನೂರಿನಲ್ಲಿ ಮಾತನಾಡಿದ ಅವರು, ಎಚ್.ಕೆ. ಪಾಟಿಲ್ ಅವರು ಹೇಳಿದ ಪ್ರತಿ ಮಾತಿಗೆ ಉತ್ತರ ನೀಡಬೇಕೆಂದು ಏನಿಲ್ಲ. ಯಾರ ಬದುಕೆಂದು ಜನರಿಗೆ ಗೊತ್ತಿದೆ ಅವರು ಉತ್ತರ ನೀಡುತ್ತಾರೆ ಎಂದರು.

ಕ್ಷೇತ್ರದ ಎಲ್ಲೆಡೆ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕ್ಷೇತ್ರ ಜನರ ನಿರೀಕ್ಷೆ ತುಂಬಾ ಇದೆ. ಆ ನಿರೀಕ್ಷೆಯಂತೆ ಕೆಲಸ ಮಾಡುವೆ ಎಂದರು.

ಬಿಜೆಪಿ ಒಡೆದ ಮನೆ, ಬೊಮ್ಮಾಯಿ ಏಕಾಂಗಿ ಪ್ರಚಾರ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಚುನಾವಣೆಯಿದ್ದರೂ ನಾನು ಒಬ್ಬನೇ ಸಾಕು. ನಿನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಎಷ್ಟು ಒಗಟ್ಟಿತ್ತು ಎಂದು ತಿಳಿದಿದೆ. ಸಭೆಯ ಹಾಲ್ ಗಿಂತ ಸಭೆಯ ಪ್ರಮುಖ ವೇದಿಕೆಯಲ್ಲಿ ನಾಯಕರು ಹೆಚ್ಚಿದ್ದರು. ನಿನ್ನೆ ಕಾಂಗ್ರೆಸ್ ಸಭೆ ನೋಡಿದರೆ ಕಾಂಗ್ರೆಸ್ ನಲ್ಲಿ ಒಗಟ್ಟಿಲ್ಲ ಎಂದು ಗೊತ್ತಾಗುತ್ತದೆ ಎಂದರು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ