Breaking News

ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು…….

Spread the love

ರಾಯಚೂರು: ರೈತರು ದೇಶದ ಬೆನ್ನೆಲುಬು ಅನ್ನೋದು ಕೇವಲ ಮಾತಿಗೆ ಸೀಮಿತವಾಗಿದೆ. ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಸಾಲಸೂಲ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರು ಇರುತ್ತಾರೆ. ಆದರೆ ರೈತರಿಗೆ ಮೋಸ ಮಾಡಲೆಂದೇ ಇರುವ ಕಳಪೆ ಬೀಜ ತಯಾರಿಕಾ ಕಂಪನಿಗಳು ಮಾತ್ರ ರೈತರ ಬದುಕನ್ನೇ ಮುಳುಗಿಸುತ್ತಿವೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಖುಷಿಯಾಗಿದ್ದ ರಾಯಚೂರಿನ ಸಿಂಧನೂರು, ಮಸ್ಕಿ ತಾಲೂಕಿನ ಈ ರೈತರು ಈಗ ಮೋಸಹೊಗಿದ್ದಾರೆ. ಸೂರ್ಯಕಾಂತಿ ಬೀಜ ಬಿತ್ತಿ 20 ದಿನಗಳಾದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೀಜ ಕಳಪೆಯಾಗಿದೆ. ಮೋಸಹೋಗಿ ಕೈ ಸುಟ್ಟುಕೊಂಡಿರುವ ರೈತರು ಕಂಪನಿಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮುಂಗಾರು ಹಂಗಾಮಿನ ಬಿತ್ತನೆ ಎಲ್ಲೆಡೆ ಜೋರಾಗಿ ನಡೆದಿದೆ. ಇದೇ ಸಮಯದಲ್ಲಿ ಮಳೆಯನ್ನು ನಂಬಿ ಜಿಲ್ಲೆಯ ಸಿಂಧನೂರು ತಾಲೂಕಿನ ನೂರಾರು ಜನ ರೈತರು ತೇಜ ಕಂಪನಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದಾರೆ. ತುರ್ವಿಹಾಳದ ಶ್ರೀ ಬಸವ ಅನ್ನದಾತ ಟ್ರೇಡರ್ಸ್ ನಲ್ಲಿ ತೇಜ ಕಂಪನಿಯ ಸೂರ್ಯಕಾಂತಿ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. 20 ದಿನ ಕಳೆದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಪನಿಯು ಕಳಪೆ ಬೀಜ ನೀಡಿ ಮೋಸ ಮಾಡಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಅಮಾಯಕ ರೈತರಿಗೆ ಮೋಸ ಮಾಡುವ ಕಂಪನಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಕಳಪೆ ಬೀಜ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.


Spread the love

About Laxminews 24x7

Check Also

ಅಣ್ಣನ ಮೇಲಿನ ಸೇಡಿಗೆ ಮಗನನ್ನೇ ಬಲಿ ಪಡೆದ: 3 ವರ್ಷದ ಬಾಲಕನ ಕತ್ತು ಕೊಯ್ದ ಚಿಕ್ಕಪ್ಪ

Spread the loveಬಾಗಲಕೋಟೆ, (ಜುಲೈ 22): ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ