Breaking News

ವಿಶ್ವಕಪ್ ಫೈನಲ್​​ನಲ್ಲಿ ಭಾರತದ ಸೋಲು: ನಿರಾಸೆಯಿಂದ ಯುವಕ ಸಾವು!

Spread the love

ಗುವಾಹಟಿ(ಅಸ್ಸೋಂ): ನಿನ್ನೆ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿದ್ದರಿಂದ ತೀವ್ರ ನಿರಾಸೆಯಿಂದ ಖಿನ್ನತೆಗೆ ಒಳಗಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಗುವಾಹಟಿಯ ಸಾವ್​ಕುಚಿಯಲ್ಲಿ ನಡೆದಿದೆ.

ಮೃಣಾಲ್ ಮಜುಂದಾರ್‌(20) ಮೃತ ಯುವಕ.

ಮೃತ ಮೃಣಾಲ್ ಕುಟುಂಬಸ್ಥರ ಪ್ರಕಾರ, ಮೃಣಾಲ್ ನಿನ್ನೆ ಭಾರತದ ಸೋಲಿನಿಂದ ನಿರಾಸೆಗೊಂಡು ಊಟ ಸೇವಿಸದೇ ರಾತ್ರಿ 11 ಗಂಟೆಗೆ ಮಲಗಿದ್ದರು. ಮೃಣಾಲ್ ಬೆಳಗ್ಗೆ ಎಷ್ಟೊತ್ತಾದರೂ ಏಳದಿದ್ದಾಗ. ಅನುಮಾನಗೊಂಡ ಕುಟುಂಬಸ್ಥರು, ಮೃಣಾಲ್​ ಮಲಗಿದ್ದ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ಮೃಣಾಲ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ಕಂಡು ತಕ್ಷಣ ಅವರನ್ನು ಜಿಎಂಸಿಎಚ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೃಣಾಲ್​ನನ್ನು ಪರೀಕ್ಷಿಸಿದ ವೈದ್ಯರು, ಮೃಣಾಲ್ ಈಗಾಗಲೇ​ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮೃತ ಮೃಣಾಲ್ ಮಜುಂದಾರ್ ಐಟಿಐ ವಿದ್ಯಾರ್ಥಿಯಾಗಿದ್ದಾರೆ. ಮೃಣಾಲ್ ಭಾರತ ಸೋತಿದ್ದರಿಂದ ನಿರಾಸೆಗೊಂಡು ಸಾವನ್ನಪ್ಪಿದ್ದಾರೆ


Spread the love

About Laxminews 24x7

Check Also

ಊಟಕ್ಕೆ ಸೇರುವುದೇ ಅಪರಾಧ ಎನ್ನುವ ರೀತಿ ಆಡುತ್ತೀರಲ್ಲ: ಸಿಎಂ ಗರಂ

Spread the loveಬೆಂಗಳೂರು: “ಊಟಕ್ಕೆ ಸೇರುವುದು ಅಪರಾಧ ಎನ್ನುವ ರೀತಿ ಆಡುತ್ತೀರಲ್ಲ” ಎಂದು ಸಿಎಂ ಸಿದ್ದರಾಮಯ್ಯ ಅವರು ಸಿಟ್ಟನ್ನು ಹೊರಹಾಕಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ