Breaking News

Yearly Archives: 2026

ಪ್ರೀತಿಯ ವಿದ್ಯಾರ್ಥಿಗಳೆ ನಿಮಗೆ ವಿದಾಯ ಎಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಮಡಿಕೇರಿ: ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಶಿಕ್ಷಕಿಯೊಬ್ಬರು  ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ  ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಹಿಣಿ (51) ಆತ್ಮಹತ್ಯೆಗೆ ಶರಣಾದ ಶಿಕ್ಷಕಿ. ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಕೋವಿಯಿಂದ ಗುಂಡು ಹೊಡೆದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Read More »

ಬೆಳಗಾವಿಯಲ್ಲಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ – ಮಗಳು ಓದುತ್ತಿದ್ದ ಮೊದಲ ಮಹಡಿಯೇ ಟಾರ್ಗೆಟ್‌

ಬೆಳಗಾವಿ: ನಗರದ  ಮಂಡೋಳಿ ರಸ್ತೆಯಲ್ಲಿರುವ ವಕೀಲೆಯೊಬ್ಬರ  ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಆತಂಕಕಾರಿ ಘಟನೆ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಮನೆ ಮೇಲೆ ದಾಳಿ ನಡೆದಿದೆ. ಏ.25ರ ರಾತ್ರಿ 1ರಿಂದ 2 ಗಂಟೆಯ ಸುಮಾರಿನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಮನೆಯ ಮೊದಲ ಮಹಡಿಯಲ್ಲಿ ಪುತ್ರಿ ಓದುತ್ತಿದ್ದಳು. ಈ ವೇಳೆ ದಾಳಿ ನಡೆದಿದೆ. ಮನೆಯ ಗ್ಲಾಸ್ ಮೇಲೆ ಫೈರಿಂಗ್ …

Read More »

ಸಚಿವರ ತವರಲ್ಲೇ ಸರಾಯಿ ಸದ್ದು: ಬಯಲಾಯ್ತು ಮಂತ್ರಿ ಆಪ್ತರ ಅಸಲಿ ಮುಖವಾಡ! 

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಮದ್ಯದ ಮಳೆ! 🍻 ಸಣ್ಣದುದಾರರಿಗೆ ಹಪ್ತಾ ಕಾಟ, ಮಂತ್ರಿ ಬೆಂಬಲಿಗರಿಗೆ ರಾಜಾತಿಥ್ಯ? ಅಚ್ಚರಿಯ ವಿಷಯ ಅಂದ್ರೆ, ಈ ಅಕ್ರಮದಲ್ಲಿ ಪತ್ರಕರ್ತನೂ ಭಾಗಿ! ಮಾಧ್ಯಮ ರಂಗಕ್ಕೆ ಅಂಟಿದ ಈ ಸರಾಯಿ ಕಳಂಕದ ಕರಾಳ ಸತ್ಯವನ್ನು ‘ಅಸಲಿ ಸುದ್ದಿ’ ತಂಡ ರಿಯಾಲಿಟಿ ಚೆಕ್ ನಡೆಸಿ ಬಯಲಿಗೆಳೆದಿದೆ. ಸಚಿವರ ಕೃಪಾಕಟಾಕ್ಷ ಯಾರ ಮೇಲಿದೆ? ಹಪ್ತಾ ಹಣ ಎಲ್ಲಿಗೆ ತಲುಪುತ್ತಿದೆ? ಸಚಿವರ ಜಿಲ್ಲೆಯ ಈ …

Read More »

ʻಕೈʼಗೆ ಶಕ್ತಿ ತುಂಬಿದ ಅಹಿಂದ: ಸಚಿವ ಸತೀಶ್‌ ಜಾರಕಿಹೊಳಿ

ಹುಬ್ಬಳ್ಳಿ: ಅಹಿಂದ ಸಂಘಟನೆಯು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಟ್ಟಿದ್ದು, ಮುಂದೆಯೂ ಶೋಷಿತ ವರ್ಗಗಳ ಹಿತರಕ್ಷಣೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಇಲ್ಲಿನ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಅಹಿಂದ ಕರ್ನಾಟಕ ಹೋರಾಟ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಅಹಿಂದ 25 ಹೋರಾಟ ಸಾಧನೆ, ಸಂಕಲ್ಪ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ’ ವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಹಿಂದ …

Read More »

ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ – ಪಂಚಮಸಾಲಿ ಪೀಠದ ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಸವಾಲು

ದಾವಣಗೆರೆ: ಪಂಚಮಸಾಲಿ ಮಠದ ವಿವಾದ ಭಾರೀ ಭುಗಿಲೆದ್ದಿದೆ. ಮಠದ ಟ್ರಸ್ಟಿಗಳ ವಿರುದ್ಧ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್  ಆಕ್ರೋಶ ಹೊರಹಾಕಿದ್ದು, 2008 ರಲ್ಲಿ ಪಂಚಮಸಾಲಿ ಮಠ ಆರಂಭವಾಗಿದೆ. ಕೋಟ್ಯಂತರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಲೆಕ್ಕ ಕೊಡಿ ಎಂದರೆ ಟ್ರಸ್ಟ್‌ನವರು ಯಾಕೆ ಕೊಡಬೇಕು ಎನ್ನುತ್ತಿದ್ದಾರೆ. ಅದರೆ ತರಾತೂರಿಯಲ್ಲಿ ಈಗ ಲೆಕ್ಕ ಕೊಡಲು ಮುಂದಾಗಿದ್ದಾರೆ. ನೀವು ಪ್ರಾಮಾಣಿಕವಾಗಿದ್ದರೆ ಕೊಟ್ಟೂರು ಅಥವಾ ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡಿ. ನಾವು ಬರುತ್ತೇವೆ ಎಂದು ಸವಾಲು ಹಾಕಿದ್ದಾರೆ. …

Read More »

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ

ಅಥಣಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ ಶನಿವಾರ, ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಬಳಿ ಇರುವ ಪ್ರಶಾಂತ ಹೋಟೆಲ್ ಮತ್ತು ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲಾಡ್ಜ್ ಮಾಲಿಕ ಸರದಾರ ಕಾಂಬಳೆ ಹಾಗೂ ಪ್ರವೀಣ ಮಲ್ಲಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಲಾಡ್ಜ್‌ನಲ್ಲಿ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ಈ ಅಕ್ರಮ ಕೃತ್ಯ ನಡೆಸುತ್ತಿದ್ದರು. ದಾಳಿಯ ವೇಳೆ ಮಹಿಳೆಯನ್ನು ರಕ್ಷಣೆ …

Read More »

ವಿಮಾನದಲ್ಲಿ ಬಂದು ಕಾಪರ್ ವೈರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಬೆಂಗಳೂರು ಯಶವಂತಪುರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ

ಮಾಡೋದು ಕಾಪರ್ ಕಳ್ಳತನ ಆದ್ರೆ ಓಡಾಟ ಮಾತ್ರ ವಿಮಾನದಲ್ಲಿ… ಕಳ್ಳತನ ಮಾಡಲು ಯೂನಿಫಾರ್ಮ್ ಹೋಲಿಸಿಕೊಂಡಿದ್ದ ಆರೋಪಿಗಳು ವಿಮಾನದಲ್ಲಿ ಬಂದು ಕಾಪರ್ ವೈರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಬೆಂಗಳೂರು ಯಶವಂತಪುರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ ಉತ್ತರ ಪ್ರದೇಶ ಮೂಲದ ಮೂವರು ಖತರ್ನಾಕ್ ಆರೋಪಿಗಳ ಬಂಧನ ರವಿ ಚವ್ಹಾಣ್ , ಸಂದೀಪ್, ಹಾಗೂ ಸೈಯದ್ ಜಾಹೇದ್ ಬಂಧಿತ ಆರೋಪಿಗಳು ಮೂವರು ಆರೋಪಿಗಳು ಉತ್ತರ ಪ್ರದೇಶ ಮೂಲದ ಆರೋಪಿಗಳು BSNL ನ …

Read More »

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! * ಖಾನಾಪುರ ರಸ್ತೆ ಕಾಮಗಾರಿಗೆ ವೇಗ ನೀಡಲು ಶಾಸಕರ ಮನವಿ * ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ವಿಠ್ಠಲ ಹಲಗೇಕರ * ರೈತರಿಗೆ ತಕ್ಷಣವೇ ಪರಿಹಾರ ನೀಡಲು ಶಾಸಕರ ಆಗ್ರಹ * ಮೀನು ಮಾರುಕಟ್ಟೆ ರಸ್ತೆ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ ಖಾನಾಪುರ ಪಟ್ಟಣದ ಪ್ರಮುಖ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರೋದು ಈಗ …

Read More »

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ ಕಳ್ಳತನ ಜಾಲ ಬೇಧಿಸಿದ ಬೆಳಗಾವಿ ಪೊಲೀಸರು • ಮೂವರು ಬೈಕ್ ಕಳ್ಳರ ಬಂಧನ ಯಶಸ್ವಿ • 20 ಬೈಕ್ ವಶ; 11 ಲಕ್ಷ ಮೌಲ್ಯ • ಯಳ್ಳೂರ ಬೈಕ್ ಕಳ್ಳತನ ಪ್ರಕರಣ ಸುಖಾಂತ್ಯ ಯಳ್ಳೂರ ಗ್ರಾಮದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫಕೀರಪ್ಪ …

Read More »

ಮುಂದಿನ ದಿನದಲ್ಲಿ ದೇಶದಲ್ಲಿ ಅನ್ನ, ನೀರಿಗೆ ಸಮಸ್ಯೆ: ಕೋಡಿಮಠ ಶ್ರೀ ಭವಿಷ್ಯ

ಮದ್ದೂರು: ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿಗೆ ಸಮಸ್ಯೆ ಎದುರಾಗಲಿದ್ದು ಪ್ರಕೃತಿಯಲ್ಲಿ ಏರುಪೇರಾಗಲಿದೆ ಎಂದು ಶ್ರೀ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ತಾಲೂಕಿನ ಚಾಮನಹಳ್ಳಿಯ ಶ್ರೀ ಬಂಡೆ ಶನೈಶ್ಚರಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ಅಪಮೃತ್ಯುಗಳು ಹೆಚ್ಚಾಗಲಿದೆ. ಆದರೆ, ರಾಜ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ದೈವಾರಾಧನೆಗಳು ನಡೆಸುತ್ತಿರುವ …

Read More »