Breaking News

Daily Archives: ಏಪ್ರಿಲ್ 29, 2026

ಸಿದ್ದರಾಮಯ್ಯ 15 ದಿನಗಳ ನಂತರ ಸಿಎಂ ಆಗಿ ಇರಲ್ಲ: ಸಂಸದ ಗೋವಿಂದ ಕಾರಜೋಳ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಕಾಂಗ್ರೆಸ್ ಶಾಸಕರು, ಸಚಿವರು ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ, ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು, ಇಂದು ಬೆಂಗಳೂರಿನಲ್ಲಿ ಮಾತನಾಡಿ “15 ದಿನಗಳ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಇರುವುದಿಲ್ಲ. ಕುರ್ಚಿಗಾಗಿ ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ. ಮೇ 4 ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತದೆ. ಸಿದ್ದರಾಮಯ್ಯರ ಕುರ್ಚಿ ಫಲಿತಾಂಶವು ಪ್ರಕಟವಾಗಲಿದೆ” …

Read More »

ಸಹೋದರಿ ಸಾವಿನ ಸರ್ಟಿಫಿಕೇಟ್ ‌ಕೇಳಿದ ಬ್ಯಾಂಕ್ ಸಿಬ್ಬಂದಿ ; ಅಸ್ಥಿಪಂಜರದ ಜೊತೆ ಬಂದ ಸಹೋದರ

ತನ್ನ ಮೃತ ಸಹೋದರಿಯ ಹೆಸರಿನಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಹಿಂಪಡೆಯಲು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಆಕೆಯ ಅಸ್ಥಿಪಂಜರವನ್ನು ಬ್ಯಾಂಕಿಗೆ ತಂದಿರುವ ವಿಚಿತ್ರ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಾನಾ ಬ್ಲಾಕ್‌ನಲ್ಲಿರುವ ಒಡಿಶಾ ಗ್ರಾಮೀಣ ಬ್ಯಾಂಕಿನ ಮಾಲಿಪೋಸಿ ಶಾಖೆಯಲ್ಲಿ ನಡೆದಿದೆ. ಆ ವ್ಯಕ್ತಿಯನ್ನು ಡಯಾನಾಲಿ ಗ್ರಾಮದ ಜೀತು ಮುಂಡಾ (50) ಎಂದು ಗುರುತಿಸಲಾಗಿದೆ. ಈತ ಜನವರಿ 26, 2026 ರಂದು ಮೃತಪಟ್ಟಿದ್ದ ತನ್ನ ಸಹೋದರಿ ಕಲ್ರಾ ಮುಂಡಾ (56) ಅವರ ಬ್ಯಾಂಕ್ …

Read More »