Breaking News

Daily Archives: ಏಪ್ರಿಲ್ 18, 2026

ಅಂಕೋಲಾ ಹೆದ್ದಾರಿಯಲ್ಲಿ ಟ್ಯಾಂಕರ್ ಅಗ್ನಿ ಅವಘಡ: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಅಂಕೋಲಾ: ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ರಾಸಾಯನಿಕ ಅಥವಾ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಪಲ್ಟಿಯಾಗಿ ಭಾರಿ ಬೆಂಕಿಗೆ ಆಹುತಿಯಾಗಿದೆ. ರಸ್ತೆಯ ಮಧ್ಯೆಯೇ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವ ಪರಿಣಾಮ, ಅಂಕೋಲಾ-ಹುಬ್ಬಳ್ಳಿ ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಅಗಸೂರು ಪಂಚಾಯತ್ ವ್ಯಾಪ್ತಿಗೆ ಸೇರುವ ಕಂಚಿನಬಾಗಿಲು ಬಳಿ ಈ ಘಟನೆ ಸಂಭವಿಸಿದೆ. ನೋಂದಣಿ ಸಂಖ್ಯೆಯ ಈ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ …

Read More »

ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸುತ್ತಿರುವ ನೀರು ಮೂರು ದಿನಗಳವರೆಗೆ ಹೆಚ್ಚುವರಿ ವಿಸ್ತರಣೆ

ಗೋಕಾಕ; ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಣೆ ಮಾಡಿರುವುದಕ್ಕೆ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ 10 ದಿನಗಳತನಕ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸಿದ್ದು, ಆದರೂ ಕೌಜಲಗಿ ಉಪ ವಿಭಾಗದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ ಗ್ರಾಮಗಳಿಗೆ ನೀರು …

Read More »

ಸಿದ್ದಾಪುರದ ಮೂಲದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್‌ಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಬಡ್ತಿ

ಸಿದ್ದಾಪುರ :ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ, ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದವರಾದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್ ಅವರಿಗೆ ಕೇಂದ್ರ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ಒಲಿದುಬಂದಿದೆ. ಕೇಂದ್ರ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ, ಇದೀಗ ಕೇಂದ್ರ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ. ದಕ್ಷ ಅಧಿಕಾರಿಗೆ ಒಲಿದ ಉನ್ನತ ಹುದ್ದೆ: …

Read More »

ವಿನಯ್ ಕುಲಕರ್ಣಿ ಕ್ರೌರ್ಯಕ್ಕೆ ನಲುಗಿತ್ತು ಧಾರವಾಡ ಮುರುಘಾಮಠದ ಶಿವಯೋಗಿ ಶ್ರೀ ಹೃದಯ..!

ಸಣ್ಣ ವಯಸ್ಸಿನಲ್ಲಿ ಸಿಕ್ಕ ಪದವಿಯಿಂದ ಈ ಮನುಷ್ಯ ರಾಕ್ಷಸನಾಗಿ ಪರಿವರ್ತನೆಯಾಗಿದ್ದ. ಧಾರವಾಡದ ಮುರುಘಾ ಮಠದ ಶ್ರೇಷ್ಠ ಪರಂಪರೆಯ ಸರಳ‌ ಸಂತ ಶಿವಯೋಗಿ ಸ್ವಾಮೀಜಿ ವಿನಯ್ ಕುಲಕರ್ಣಿ ಎಂಬ ರಾಕ್ಷಸನ ಕೈಯಲ್ಲಿ‌ ಸಿಲುಕಿ ನರಳಿ ಹೋಗಿದ್ದರು. ಮುರುಘಾ ಮಠದ ಹಿರಿಯ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿ ಪಾದ ಕಮಲಗಳಿಂದ ಅರಳಿದ್ದ ಶಿವಯೋಗಿ ಶ್ರೀ ಮಗು ಮನಸ್ಸಿನಿಂದ ಭಕ್ತರ ಹೃಯದ ಗೆದ್ದಿದ್ದರು. ಆದರೆ ಅಧಿಕಾರ ಹಾಗೂ ಮಠದ ಆಸ್ತಿ ಮೇಲೆ ವಿನಯ್ ಕುಲಕರ್ಣಿ …

Read More »

ಜಮಖಂಡಿ ಜೈಲರ್ PSI ವೀರಭದ್ರ ಕುಂಬಾರ ಕಾರ್ಯವೈಖರಿಗೆ ಕಾರಾಗೃಹ DGP ಅಲೋಕ್ ಕುಮಾರ್ ಮೆಚ್ಚುಗೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಾರಾಗೃಹಕ್ಕೆ ಇಂದು ಬೆಳಿಗ್ಗೆ ಧಿಡೀರ್ ಭೇಟಿ ನೀಡಿದ DGP ಅಲೋಕ್ ಕುಮಾರ ಕಾರಾಗೃಹ ವೀಕ್ಷಣೆ ಮಾಡಿ ಕೈದಿಗಳೊಂದಿಗೆ ಮಾತನಾಡಿ ಜೈಲಿನಲ್ಲಿ ನೀಡುತ್ತಿರುವ ಸೌಕರ್ಯ ಕುರಿತು ಚರ್ಚಿಸಿದ್ದಾರೆ. ಅದರಂತೆ ಕೈದಿಗಳು ನಮಗೇ ಯಾವುದೇ ತೊಂದರೆ ಇಲ್ಲ ನಮಗೇ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿದ್ದಾರೆ. ಪ್ರತಿವಾರ ಶುದ್ಧವಾದ ಮಾಂಸಹಾರ ಆಹಾರ ಕೂಡ ನೀಡಲಾಗುತ್ತಿದೆ. ಪ್ರತಿ ನಿತ್ಯ ಸರಿಯಾದ ಸಮಯಕ್ಕೆ ಊಟ ನೀಡಲಾಗುತ್ತಿದೆ ಕೈದಿಗಳು ಹೇಳಿದ್ದಾರೆ. ಜೊತೆಗೆ ಇಲ್ಲಿನ …

Read More »