ಬೆಂಗಳೂರು: ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಎಎಸ್ಐ ದಯಾನಂದಸ್ವಾಮಿ ಮನೆ ಮೇಲೆ ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೇವಲ ಐವತ್ತು ಸಾವಿರ ನಗದು ಪತ್ತೆಯಾಗಿದ್ದು, ಅಧಿಕಾರಿಗಳೇ ಶಾಕ್ ಆಗಿದ್ರು. ಆರು ಕೋಟಿ ಮೌಲ್ಯದ ಬಂಗಲೆಯಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದ್ದು, ದಯಾನಂದಸ್ವಾಮಿ ದಾಳಿಗೂ ಮುನ್ನವೇ ದಾಖಲೆಗಳನ್ನ ಎಸ್ಕೇಪ್ ಮಾಡಿಸಿರುವ ಅನುಮಾನ ಮೂಡಿದೆ. ಮನೆಯ ದಾಖಲೆಗಳು, ಹಾಗೂ ಕೆಲವು ವಾಹನಗಳ ದಾಖಲೆಗಳು ಮಾತ್ರ ನಿನ್ನೆ ಪತ್ತೆಯಾಗಿದೆ. …
Read More »Monthly Archives: ಜೂನ್ 2021
ಕಂಡೋರ ಸೈಟಿಗೆ ರಾಕ್ಲೈನ್ ವೆಂಕಟೇಶ್ ಬೇಲಿ: ಕೋರ್ಟ್ ತಪರಾಕಿ
ಬೆಂಗಳೂರು: ಸ್ಯಾಂಡಲ್ವುಡ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿರುದ್ಧ ಅಕ್ರಮವಾಗಿ ಬೇರೊಬ್ಬರ ಸೈಟ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಾಗರಬಾವಿಯಲ್ಲಿ ಸ್ನೇಹಶೀಲ ಎಂಬರವರಿಗೆ ಮಂಜೂರಾಗಿದ್ದ ನಿವೇಶನವನ್ನು ಅವರು ತನ್ನ ಸಹೋದರಿ ಪುಷ್ಪಲತಾರಿಗೆ ಗಿಫ್ಟ್ ಮಾಡಿದ್ದರು. ಈ ನಿವೇಶನವನ್ನು ರಾಕ್ಲೈನ್ ವೆಂಕಟೇಶ್ ಅಕ್ರಮವಾಗಿ ಒತ್ತುವಾರಿ ಮಾಡಿದ್ದಾರೆ ಎಂದು ಪುಪ್ಪಲತಾ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ರಾಕ್ಲೈನ್ ಮತ್ತು ಅವರ ಸಹಚರರಿಗೆ ಪುಪ್ಪಲತಾ ಅವರ ಜಾಗದಲ್ಲಿ ಅಕ್ರಮ …
Read More »ಕೊನೆಗೂ ಜಾರಿಯಾಯ್ತು ರೋಹಿಣಿ ಸಿಂಧೂರಿ ಆದೇಶ.. ಭೂಗಳ್ಳರಲ್ಲಿ ನಡುಕ
ಮೈಸೂರು: ಭೂ ಕಬಳಿಕೆ ಪ್ರಕರಣ ಸಂಬಂಧ ಕೊನೆಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶ ಜಾರಿಯಾಗಿದೆ. ನಿರ್ಗಮಿತ ಡಿಸಿ ರೋಹಿಣಿ ಆದೇಶದಿಂದ ನಗರಾಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತಿದ್ದು, ಮೂಡಾದಿಂದ ಇಂದು ಕೇರ್ಗಳ್ಳಿಯಲ್ಲಿ ಅನಧಿಕೃತ ಒತ್ತುವರಿ ತೆರವು ಮಾಡಲಾಗ್ತಿದೆ. ಕೇರ್ಗಳ್ಳಿ ಸರ್ವೆ ನಂಬರ್ 115ರಲ್ಲಿ ಒತ್ತುವರಿ ಆಗಿದೆ ಎನ್ನಲಾಗಿದ್ದು, ಆರ್ಟಿಸಿಯಲ್ಲಿ 61 ಎಕರೆ ಹೆಚ್ಚುವರಿಯಾಗಿ ಭೂಮಿ ದಾಖಲಾಗಿದೆ. ಆರ್.ಟಿ.ನಗರ ಬಡಾವಣೆ ಉದ್ದೇಶಕ್ಕಾಗಿ ಮೂಡಾ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಖಾಸಗಿಯವರು ಅನಧಿಕೃತವಾಗಿ ಅನುಭವದಲ್ಲಿರುವುದು ಪತ್ತೆಯಾಗಿದೆ. …
Read More »ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ನಡುವೆ ಮತ್ತೊಂದು ಅಪಾಯಕಾರಿ ಗ್ರೀನ್ ಫಂಗಸ್ ಪ್ರಕರಣ ಪತ್ತೆ
ನವದೆಹಲಿ: ಕೊರೊನಾ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಗಳು ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಗ್ರೀನ್ ಫಂಗಸ್ ಎಂಬ ಮತ್ತೊಂದು ಅಪಾಯಕಾರಿ ಫಂಗಸ್ ಭಾರತದಲ್ಲಿ ಪತ್ತೆಯಾಗಿದೆ. ಕೊರೊನಾದಿಂದ ಗುಣಮುಖನಾಗಿದ್ದ ಮಧ್ಯಪ್ರದೇಶದ ಒಂದೋರ್ ನಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ. ಇದು ದೇಶದಲ್ಲೇ ಮೊದಲ ಗ್ರೀನ್ ಫಂಗಸ್ ಪ್ರಕರಣವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಂಕಿತನನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎಂದು ಅರಬಿಂದೋ ಇನ್ಸ್ ಟಿಟ್ಯೂಟ್ ಆಫ್ …
Read More »ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ- ಅಲೆಮಾರಿ ಜನಾಂಗ
ಚಿಕ್ಕೋಡಿ: ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ ಎನ್ನುವ ಅಲೆಮಾರಿ ಜನಾಂಗಕ್ಕೆ ಕೊರೊನಾ ಭಯವೇ ಇಲ್ಲದಂತಿರುವುದು ಚಿಕ್ಕೋಡಿಯಲ್ಲಿ ಕಂಡುಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಕೊರೊನಾ ರೋಗದ ಭಯವೇ ಇಲ್ಲ. ಕೊರೊನಾ ರೋಗ ನಮಗೆ ಬರುವದಿಲ್ಲ. ಈ ರೋಗಕ್ಕೂ ನಾವು ಹೆದರುವದಿಲ್ಲ. ಎಕೆಂದರೇ ನಮ್ಮನ್ನ ದುರ್ಗಾಮಾತಾ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ಈ ಜನಾಂಗದ ಜನರಿದ್ದಾರೆ. ಇಡೀ ಜಗತ್ತನ್ನೇ ಕೊರೊನಾ ಮಹಾಮಾರಿ …
Read More »ಕನ್ನಡ ಸಿನಿ ಕಾರ್ಮಿಕರ ನೆರವಿಗೆ ನಿಂತ ಸಾಯಿ ಕುಮಾರ್ ಸಹೋದರರು
ಕೊರೊನಾ ಎರಡನೇ ಅಲೆ ಭೀಕರ ಪರಿಸ್ಥಿತಿ ಎದುರಿಸಲು ಸಾಕಷ್ಟು ಮಂದಿ ನೆರವಿಗೆ ನಿಂತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಮಂದಿಗೆ ಸಿನಿ ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ಲಾಕ್ ಡೌನ್ನಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದೆ. ಸಿನಿ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಕೆಲಸವಿಲ್ಲದೆ ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಅನೇಕ ಸ್ಟಾರ್ ಕಲಾವಿದರು ನೆರವು ನೀಡಿದ್ದಾರೆ. ಸುದೀಪ್, ಉಪೇಂದ್ರ, …
Read More »ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದಿದ್ದ ಇಂಜಿನಿಯರಿಂಗ್ ಪದವೀಧರೆ ಅರೆಸ್ಟ್
ಬೆಂಗಳೂರು: ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದ ಇಂಜಿನಿಯರಿಂಗ್ ಪದವೀಧರೆ ರೇಣುಕಾ ಎಂಬಾಕೆಯನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಖಾಸಗಿ ಕಾಲೇಜ್ನಲ್ಲಿ ಸಿದ್ಧಾರ್ಥ್ ಎಂಬುವನನ್ನ ಪ್ರೀತಿಸುತ್ತಿದ್ದ ರೇಣುಕಾಳಿಂದ ಪೊಲೀಸರಿಗೆ ಅನುಮಾನ ಬಾರದಂತೆ ಸಿದ್ದಾರ್ಥ್ ಗಾಂಜಾ ಸಪ್ಲೈ ಮಾಡಿಸ್ತಿದ್ದ ಎನ್ನಲಾಗಿದೆ. ಸಿದ್ದಾರ್ಥ್ ಫೋನ್ನಿಂದ ಕಾನ್ಫರೆನ್ಸ್ ಕಾಲ್ನಲ್ಲಿ ಕಸ್ಟಮರ್ಗೆ ಕಾಲ್ ಮಾಡ್ತಿದ್ದ ರೇಣುಕಾ ಆಂಧ್ರಪ್ರದೇಶದಿಂದ ಬಂದು ಮುಖ್ಯ ರಸ್ತೆಗಳಲ್ಲಿರುವ ಓಯೋ ರೂಮ್ಗೆ ಕಸ್ಟಮರ್ಗೆ ಬರಲು ಹೇಳಿ ಅಲ್ಲೇ ಗಾಂಜಾ ಸಪ್ಲೈ ಮಾಡುತ್ತಿದ್ದಳಂತೆ. ಸದಾಶಿವನಗರ ಪಿಎಸ್ಐ …
Read More »ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು
ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿದೆ. ಸಿಎಂ ನಿವಾಸ ಕಾವೇರಿಗೆ ಶಾಸಕರು ದೌಡಾಯಿಸುತ್ತಿದ್ದು, ಕಾವೇರಿ ನಿವಾಸದಲ್ಲಿ ಚರ್ಚೆ ಕಾವೇರಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಶಾಸಕ ಅರವಿಂದ್ ಬೆಲ್ಲದ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಅರವಿಂದ್ ಬೆಲ್ಲದ್ ಕರೆಸಿಕೊಂಡು, ದೆಹಲಿಯ …
Read More »ಸಿ.ಪಿ ಯೋಗೇಶ್ವರ್ ಮೇಲೆ ಕಿಡಿಕಾರಿದ ಸಚಿವ ಬಿ.ಸಿ ಪಾಟೀಲ್
ಮೈಸೂರು: ‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ ಅಲ್ಲ. ಇಡೀ ಜಗತ್ತು ಕೊರೋನಾ ಸೋಂಕಿನಿಂದ ತತ್ತರಿಸುವ ಕಾರಣ ಕೋವಿಡ್ ನಿರ್ವಹಣೆಗೆ ಆದ್ಯತೆ ಕಲ್ಪಿಸಬೇಕು. ರಾಜಕೀಯ ಆ ಬಳಿಕ ಮಾಡೋಣ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ ಸೊಸೆ ಬಂದ ಬಳಿಕ ಆಕೆ ಮನೆ …
Read More »ಲಕ್ಷಾಂತರ ರೂ.ಮೌಲ್ಯದ ನಕಲಿ ರಸಗೊಬ್ಬರ ಸಾಗಾಣಿಕೆ: ಪೊಲೀಸರು-ಅಧಿಕಾರಿಗಳ ದಾಳಿ
ಗಂಗಾವತಿ: ನಕಲಿ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಪ್ರಕರಣಗಳು ಹೆಚ್ಚುತ್ತಿದ್ದು ,ಗಂಗಾವತಿಯಲ್ಲಿ ಕೃಷಿ ಜಾಗೃತದಳ ಹಾಗೂ ಪೊಲೀಸರು ದಾಳಿ ನಡೆಸಿ ಸುಮಾರು 300 ಚೀಲ (15 ಟನ್) ಜೈಕಿಸಾನ್ ರಸಗೊಬ್ಬರದ ಚೀಲಗಳಲ್ಲಿ ತುಂಬಿದ್ದ ಡಿಎಪಿ ರಸಗೊಬ್ಬರ ವಶಕ್ಕೆ ಪಡೆದು ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೃಷಿ ಜಾಗೃತ ದಳದ ಅಧಿಕಾರಿಗಳಾದ ಎಡಿಎ ಸಂತೋಷ ಪಟ್ಟದಕಲ್ಲು, ತಾಂತ್ರಿಕ ಅಧಿಕಾರಿ ಲಿಂಗಪ್ಪ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ …
Read More »