Breaking News
Home / 2021 / ಮೇ / 26 (page 4)

Daily Archives: ಮೇ 26, 2021

ಜೂನ್ 7 ರ ನಂತರವೂ ಮುಗಿಯಲ್ಲ ಲಾಕ್ ಡೌನ್: ಇನ್ನೂ ಹಲವು ದಿನ ರಾಜ್ಯದ ಜನ ಮನೆಯೊಳಗೆ ಬಂಧಿ.?

ಬೆಂಗಳೂರು: ಜೂನ್ 7 ರ ವರೆಗೂ ಇರುವ ಲಾಕ್ಡೌನ್ ಮುಗಿಯಲ್ಲ. ಸದ್ಯಕ್ಕೆ ಲಾಕ್ಡೌನ್ ನಿಂದ ಮುಕ್ತಿ ಇಲ್ಲ. ಎರಡು ವಾರಗಳ ನಂತರ ರಾಜ್ಯದ ಜನರ ಮನೆ ವಾಸ ಮುಂದುವರೆಯಲಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಕೊರೋನಾ ತಡೆಗೆ ಲಾಕ್ಡೌನ್ ಜಾರಿ ಮಾಡಿದ ನಂತರ ಕೊರೋನಾ ಸಂಕು ಇಳಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಮೇ 24 ರಿಂದ ಜೂನ್ 7 ರವರೆಗೆ ಎರಡನೇ ಹಂತದ ಲಾಕ್ಡೌನ್ ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ಕಠಿಣ ನಿರ್ಬಂಧ ಜಾರಿಗೊಳಿಸಿದೆ. …

Read More »

ಕೋವಿಡ್‌ ಪೀಡಿತ ತಂದೆಯ ಮೃತದೇಹ ಸಾಗಾಟಕ್ಕೂ ಲಂಚದ ಹಣ: ಸಂಕಟ ಹಂಚಿಕೊಂಡ ನೃತ್ಯಪಟು

ಬೆಂಗಳೂರು: ಕೋವಿಡ್‌ ಪರೀಕ್ಷೆಯಿಂದ ಹಿಡಿದು ಮರಣ ಪ್ರಮಾಣಪತ್ರ ಪಡೆಯುವವರೆಗೆ.. ಹೆಜ್ಜೆ ಹೆಜ್ಜೆಗೂ ಸುಲಿಗೆ ಮಾಡುತ್ತಾರೆ. ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು ಹೆಣ ಒಯ್ಯುವ ವಾಹನದವರೆಗೂ ಎಲ್ಲೆಡೆ ಚೆಲ್ಲಬೇಕು ದುಡ್ಡು. ಸಾಲ ಮಾಡಿ ₹ 4 ಲಕ್ಷ ಖರ್ಚು ಮಾಡಿದರೂ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಕೋವಿಡ್‌ನಿಂದಾಗಿ ತಂದೆಯನ್ನು (ಮಂಜುನಾಥ ಆರಾಧ್ಯ, 52) ಕಳೆದುಕೊಂಡ ಕರುಣಾಜನಕ ಕತೆಯನ್ನು ಆನೇಕಲ್‌ನ ಚೇತನ್‌ ಆರಾಧ್ಯ ಬಿಚ್ಚಿಟ್ಟದ್ದು ಹೀಗೆ. ಮಧುಮೇಹ ಉಲ್ಬಣಗೊಂಡ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ ತಂದೆಗೆ ಕೋವಿಡ್‌ ಕಾಣಿಸಿಕೊಂಡಿದ್ದು, …

Read More »

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೋವಿಡ್​ ಸೋಂಕಿತೆ ಸಾವು

ಮಂಡ್ಯ: ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೋವಿಡ್​ ಸೋಂಕಿತ ಗರ್ಭಿಣಿ ಮೃತಪಟ್ಟಿರುವ ಕರುಣಾಜನಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಗುಣಶ್ರೀ (35) ಸಾವಿಗೀಡಾದ ಮಹಿಳೆ. ಮಳವಳ್ಳಿ ತಾಲೂಕಿನ ಬೊಮ್ಮನದೊಡ್ಡಿ ಗ್ರಾಮದ ಗುಣಶ್ರಿ, ಅರೆತಿಪ್ಪೂರಿನ ಮನೋಹರಗೌಡರಿಗೆ ಮದುವೆ ಮಾಡಿಕೊಡಲಾಗಿತ್ತು. ಗುಣಶ್ರೀ, ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಮದುವೆಯಾಗಿ 4 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಏಳೂವರೆ ತಿಂಗಳ ಗರ್ಭಿಣಿಯಾಗಿದ್ದ ಗುಣಶ್ರೀ ಅವರಿಗೆ ಇತ್ತಿಚೆಗೆ ಕರೊನಾ …

Read More »

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ..!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ. ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ ವ್ಯಾಪಿಸಿದ ಕಾರಣ ಲಭ್ಯವಿರುವ ವೈದ್ಯಕೀಯ ಸವಲತ್ತುಗಳ ಮೇಲೆ ಮಿತಿಮೀರಿದ ಒತ್ತಡ ಬಿದ್ದು ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿದೆ.   ಟ್ವಿಟರ್‌ ಬಳಕೆದಾರ ವಿಜಯ್‌ ಪರೀಖ್ ಅವರು ಇಂಥದ್ದೇ ಸನ್ನಿವೇಶದಲ್ಲಿ ತಮಗೆ ಉಂಟಾದ ಹೃದಯವಿದ್ರಾವಕ ಅನುಭವದ ಕುರಿತು ಹಂಚಿಕೊಂಡಿದ್ದಾರೆ. ಕೋವಿಡ್ ವಿರುದ್ಧದ ದೇಶದ …

Read More »

ಕೋವಿಡ್ ಸೋಂಕು ದೃಢಪಟ್ಟರೂ ಎದೆಗುಂದದೆ ಇತರರಿಗೆ ಮಾದರಿಯಾದ ವಯೋವೃದ್ದೆ

ಕುಷ್ಟಗಿ : ಮುದೇನೂರು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ನಲ್ಲಿ‌85 ವರ್ಷದ ವಯೋವೃದ್ದೆ ಆಸಂಗೆಮ್ಮ ಕೋವಿಡ್ ಸೋಂಕು ದೃಢವಾಗಿದ್ದರೂ ಲವಲವಿಕೆಯಿಂದ ಇದ್ದು ಕೋವಿಡ್ ಸೋಂಕಿಗೆ ಹೆದರದೆ ಇತರರಿಗೆ ಮಾದರಿಯಾಗಿದ್ದಾರೆ. ಮುದೇನೂರು ಕೋವಿಡ್ ಕೇರ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಅಸಂಗೆಮ್ಮ ಹಿರಿಯರು. ಕಿವಿ ಕೇಳಿಸದೇ ಇದ್ದರೂ, ಸೋಂಕಿತರ ಜೊತೆ ಧೈರ್ಯಗೆಡದೇ ಲವಲವಿಕೆಯಿಂದ ಇರುವುದು ಗಮನಾರ್ಹ ಎನಿಸಿದೆ. ಮಂಗಳವಾರ ಸಂಜೆ ಸಿಪಿಐ ನಿಂಗಪ್ಪ …

Read More »

ಜನರ ಆರೋಗ್ಯ ಸಂರಕ್ಷಣೆಗಾಗಿ ನೂತನ ಕೋವಿಡ್ ಉಪಚಾರ ಕೇಂದ್ರ ಲೋಕಾರ್ಪಣೆ ಸಚಿವೆ ಶಶಿಕಲಾ ಜೊಲ್ಲೆ.

ಚಿಕ್ಕೋಡಿ – ಮಂಗಳವಾರ ಚಿಕ್ಕೋಡಿ ನಗರದ (ಬಾಣಂತಿಕೋಡಿ) ಬಾಲಕಿಯರ ವಸತಿ ನಿಲಯದಲ್ಲಿ ತಾಲ್ಲೂಕಾಡಳಿತ, ತಾಲ್ಲೂಕಾ ಆರೋಗ್ಯ ಕೇಂದ್ರ ಹಾಗೂ ಜೊಲ್ಲೆ ಚಾರಿಟಿ ಫೌಂಡೇಶನ್ ಮತ್ತು ಭಾರತೀಯ ವೈದ್ಯಕೀಯ ಹಾಗೂ ಆಯುಷ್ ಸಂಸ್ಥೆ ವತಿಯಿಂದ ಸೋಂಕಿತರ ಚಿಕಿತ್ಸೆಗಾಗಿ 12 ಆಕ್ಸಿಜನೇಟೆಡ್ ಹಾಸಿಗೆ ಹಾಗೂ 08 ಸಾಮಾನ್ಯ ಹಾಸಿಗೆ ಸಾಮರ್ಥ್ಯದ ನೂತನ ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಲಾಯಿತು. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ …

Read More »

ಬೆಳಗಾವಿ: ಜಿಲ್ಲೆ ಮೇ 29 ಹಾಗೂ ಮೇ 30 ರಂದು ಸಂಪೂರ್ಣ ಲಾಕ್ ಡೌನ್: ಎಂ.ಜಿ.ಹಿರೇಮಠ

ಬೆಳಗಾವಿ: ಜಿಲ್ಲೆಯಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಮೇ 29 ಹಾಗೂ ಮೇ 30 ರಂದು ಎರಡು ದಿನಗಳ ಕಾಲ ವಾರಾಂತ್ಯದ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮೇ 29ರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ಸಂಪೂರ್ಣವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ, ಬೆಳಗಾವಿ ಜಿಲ್ಲೆಯಲ್ಲಿ …

Read More »

ಮೇ 26ರ ಪ್ರತಿಭಟನೆ ಶಕ್ತಿಪ್ರದರ್ಶನವಲ್ಲ, ವಿರೋಧಧ ಪ್ರದರ್ಶನ: ರೈತ ಮುಖಂಡರ ಹೇಳಿಕೆ

ಮೇ 25: ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದಿಲ್ಲಿ ಗಡಿಭಾಗದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ 6 ತಿಂಗಳು ಪೂರ್ಣಗೊಳಿಸಿದ ಸಂಕೇತವಾಗಿ ಮೇ 26ರಂದು ಆಯೋಜಿಸಿರುವ ಪ್ರತಿಭಟನೆ ರೈತರ ಶಕ್ತಿಪ್ರದರ್ಶನವಲ್ಲ. ಇದು ಕೊರೋನ ನಿಯಮಾವಳಿಯ ಹಿನ್ನೆಲೆಯಲ್ಲಿ, ಸಾಂಕೇತಿಕ ಪ್ರತಿಭಟನೆಯಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚದ(ಎಸ್ಕೆಎಂ) ಮುಖಂಡರು ಹೇಳಿರುವುದಾಗಿ ವರದಿಯಾಗಿದೆ. ‌ ನಾವು ಗ್ರಾಮದಲ್ಲಿ, ನಗರಗಳಲ್ಲಿ ಮತ್ತು ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಕಪ್ಪು ಟರ್ಬನ್, ಶಾಲು ಅಥವಾ ಬಟ್ಟೆ ಧರಿಸಿ …

Read More »

ಎಸ್‌ಎಂಎಸ್‌ನಲ್ಲಿ ಲಸಿಕೆ ಮಾಹಿತಿ!

ಕೋವಿಡ್‌-19 ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಆದರೆ ಲಸಿಕೆ ಪಡೆಯುವ ಸಮಯ ಲಭ್ಯತೆ ಕಂಡುಕೊಳ್ಳುವ ಬಗ್ಗೆ ಹಲವರಿಗೆ ತಿಳಿವಳಿಕೆ ಇಲ್ಲ. ಇದನ್ನು ನೀಗಿಸಲೆಂದೇ VaccinateMe.in ಆಯಪ್ ಕನ್ನಡ ಸೇರಿದಂತೆ ಭಾರತದ 11 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಈ ಆಯಪ್‌ ಬಳಸಿ ಲಸಿಕೆ ಪಡೆಯುವ ಸಮಯ ಕಂಡುಕೊಳ್ಳಬಹುದು. ಒಂದು ವೇಳೆ ಸದ್ಯದ ಮಟ್ಟಿಗೆ ಲಸಿಕೆ ಪಡೆಯುವ ಸಮಯ ಲಭ್ಯವಿಲ್ಲದಿದ್ದಲ್ಲಿ, ಸೈನ್‌ಅಪ್ ಮಾಡಿಕೊಂಡಲ್ಲಿ …

Read More »

ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?

ನಿಯಮಗಳನ್ನು ಪಾಲಿಸಲು ಕೇಂದ್ರ ಸರಕಾರವು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಿಗೆ ನೀಡಿದ ೩ ತಿಂಗಳ ಅವಧಿ ಮುಗಿದಿದೆ ! ಭಾರತದಲ್ಲಿ ವ್ಯವಹಾರ ಮಾಡುವಾಗ ಭಾರತದ ನಿಯಮಗಳನ್ನು ಪಾಲಿಸದ ಸಂಸ್ಥೆಗಳನ್ನು ಭಾರತ ಸರಕಾರವು ಈಗ ನಿಷೇಧಿಸಬೇಕು ! ನವ ದೆಹಲಿ – ನಾವು ಮಾಹಿತಿ ಮತ್ತು ತಂತ್ರಜ್ಞಾನದ ನಿಯಮಗಳನ್ನು ಪಾಲಿಸುತ್ತೇವೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ; ಆದರೆ ಕೆಲವು ಸೂತ್ರಗಳ ಬಗ್ಗೆ ಚರ್ಚೆಯಾಗುವುದು ಸಹ ಅವಶ್ಯಕವೇ ಆಗಿದೆ. ಇದಕ್ಕಾಗಿ ನಾವು ನಮ್ಮ …

Read More »