Breaking News

ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ

Spread the love

ಬೆಂಗಳೂರು: ನಗರದಲ್ಲಿ ವಲಸಿಗರ ದರ್ಪ ಮುಂದುವರೆದಿದೆ. ಪಟ್ಟಂದೂರು ಅಗ್ರಹಾರ ಮುಖ್ಯ ರಸ್ತೆಯಲ್ಲಿ ಜಿಬಿಎ ಪೌರಕಾರ್ಮಿಕರ ಮೇಲೆ ವಲಸಿಗ ಯುವತಿಯೊಬ್ಬಳು ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ.

ಕೇರಳ  ಮೂಲದ ವೈದೇಹಿ ಹಲ್ಲೆ ನಡೆಸಿದ ಯುವತಿ. ಟೀ ಕುಡಿದ ಕಪ್ ರಸ್ತೆ ಬದಿಯಲ್ಲಿ ಎಸೆಯ ಬೇಡಿ, ಕಸದ ಬುಟ್ಟಿಗೆ ಹಾಕಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಮಹಿಳೆ ಕಲ್ಲು ಎಸೆದಿದ್ದಾಳೆ. ಅಲ್ಲದೇ ಅವಾಚ್ಯ ಶಬ್ದ ಹಾಗೂ ಕೈ ಸನ್ನೆ ಮಾಡಿದ್ದಾಳೆ.

ಯುವತಿ ತನ್ನ ಗೆಳೆಯನ ಜೊತೆಗೆ ರಸ್ತೆ ಬದಿಯಲ್ಲಿ ಟೀ ಕುಡಿಯುತ್ತಿದ್ದಳು. ಈ ವೇಳೆ ಟೀ ಕಪ್‌ನ್ನು ರಸ್ತೆಗೆ ಎಸೆಯ ಬೇಡಿ, ಕಸದ ಬುಟ್ಟಿಗೆ ಹಾಕಿ ಎಂದು ಸ್ವಚ್ಚತಾ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾಗಿ ಪೌರಕಾರ್ಮಿಕನ ಮೇಲೆ ಯುವತಿ ಕಲ್ಲು ಎಸೆದಿದ್ದಾಳೆ.

ಬೆಳ್ಳಂ ಬೆಳಗ್ಗೆ ಯುವತಿ ನಶೆಯಲ್ಲಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೌರಕಾರ್ಮಿಕನ ದೂರಿನ ಮೇರೆಗೆ ಯುವಕ ಹಾಗೂ ಯುವತಿಯನ್ನು ವೈಟ್‌ಫೀಲ್ಡ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ಈರುಳ್ಳಿ ಪ್ರಿಯರಿಗೆ ಗುಡ್‌ನ್ಯೂಸ್ – ಹಾಫ್‌ರೇಟ್‌ನಲ್ಲಿ ಮಾರಾಟ

Spread the loveಬೆಂಗಳೂರು: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಇದರ ನಡುವೆ ಬೆಂಗಳೂರಿನಲ್ಲಿ  ಈರುಳ್ಳಿ  ಪ್ರಿಯರಿಗೆ ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ