ಬೆಳಗಾವಿಯ ವಿಘ್ನೇಶ್ವರ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಬೆಳಗಾವಿಯ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಡುವಿನ ಅಂತಿಮ ಕ್ರಿಕೆಟ್ ಪಂದ್ಯಕ್ಕೆ ಶ್ರೀ ಮಹೇಶ ಜಾಧವ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.
ಪಂದ್ಯದ ನಂತರ ಶ್ರೀ ಮಹೇಶ ಜಾಧವ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಾವುದೇ ಕ್ರೀಡಾಕೂಟದ ಉದ್ದೇಶ ಕೇವಲ ಗೆಲುವು – ಸೋಲು ಅಲ್ಲ, ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಈ ಪಂದ್ಯಾವಳಿಯಲ್ಲಿ ವಿಜೇತರಾಗಿ ಆಯ್ಕೆಯಾದ ವಿಟಿಯು ಹಾಗೂ ರನ್ನರ್ ಅಪ್ ಜಿಐಟಿ ತಂಡಗಳನ್ನು ಶ್ರೀ ಮಹೇಶ ಜಾಧವ ಅವರು ಅಭಿನಂದಿಸಿದರು.
ಸಮಾಜದ ಬದಲಾವಣೆಗೆ ಮುಖ್ಯವಿರುವ ಸಾಮಾಜಿಕ ಸೇವೆಗಳನ್ನು ಮತ್ತು ಮಾರ್ಗಗಳನ್ನು ಮಹೇಶ ಜಾಧವ ಅವರು ವಿವರಿಸಿದರು. ಸಾಮಾಜಿಕ ಉದ್ದೇಶವನ್ನು ಹೇಗೆ ಪೂರೈಸಬೇಕು ಹಾಗೂ ಸಮಾಜಕ್ಕಾಗಿ ಪ್ರತಿಯೊಬ್ಬ ನಾಗರಿಕರು ಕೊಡುಗೆ ನೀಡುವುದು ಮುಖ್ಯ ಎಂದು ಪ್ರಸ್ತುತಪಡಿಸಿದರು.