ಗೋಕಾಕ: ಬಿಜೆಪಿ ಮುಖಂಡ ರಾಜು ತಳವಾರ ಹಾಗೂ ಕುಟುಂಬಸ್ಥರಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಲಗಿಯ ಬಿಜೆಪಿ ಮುಖಂಡ ರಾಜು ತಳವಾರನನ್ನ ಬಂಧಿಸಲಾಗಿದೆ. ಗೋಕಾಕ ಡಿವೈಎಸ್ಪಿ ನೇತೃತ್ವದ ತಂಡ ರಾಜು ತಳವಾರನನ್ನ ಹೆಡೆಮುರಿ ಕಟ್ಟಿದ್ದು, ರಾಜು ತಳವಾರನನ್ನ ಕೂಡಲೇ ಬಂಧಿಸುವಂತೆ ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಿನ್ನೆಯಷ್ಟೇ ಖಡಕ್ ಸೂಚನೆ ನೀಡಿದ್ದರು. ಕ್ಷುಲ್ಲಕ ಕಾರಣಕ್ಕೆ ಚಿಕ್ಕುಗೋಳ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರಾಜು ತಳವಾರ ಆಂಡ್ ಗ್ಯಾಂಗ್ ಮೇಲೆ, ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನಗಳ ಅಡಿಯಲ್ಲಿ ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದ್ದ ಈ ಘಟನೆ ಎರಡು ದಿನಗಳ ಬಳಿಕ ಭಾರೀ ಸದ್ದು ಮಾಡಿತ್ತು, ರಾಜು ತಳವಾರ ಬಂಧನಕ್ಕೆ ಸತೀಶ್ ಜಾರಕಿಹೊಳಿ ಕೂಡ ಆಗ್ರಹಿಸಿದ್ದರು. ನಿನ್ನೆಯಷ್ಟೇ ಅಂಕಲಗಿ ಗ್ರಾಮದ ಮುಖಂಡರ ಸಭೆ ನಡೆಸಿದ್ದ ಸಚಿವ ರಮೇಶ ಜಾರಕಿಹೊಳಿ ತಕ್ಷಣವೇ ರಾಜು ತಳವಾರ ಬಂಧನಕ್ಕೆ ಸೂಚಿಸಿದ ಹಿನ್ನೆಲೆ ಪೋಲಿಸರು ಲೋಕಲ್ ಪುಡಾರಿಯನ್ನ ಬಂಧಿಸಿದ್ದಾರೆ.
Check Also
ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ
Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …