ಬೆಳಗಾವಿ :ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅಭಿಮಾನಿಗಳ ಬಳಗ ಹಾಗೂ ಆನಂದಪೂರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆನಂದಪೂರ-ಹತ್ತರಗಿ ಸೋಮವಾರ ದಿನಾಂಕ:13-07-2020 ರಂದು ಮೌಢ್ಯ ವಿರೋಧಿ ದಿನ ನೂತನ ವಾಹನ ಚಾಲನಾ ಸಮಾರಂಭಕ್ಕೆ ಆನಂದಪೂರ ಗ್ರಾಮದಿಂದ ಬೆಳಗಾವಿ ಸದಾಶಿವ ನಗರದ ಸ್ಮಶಾನದ ವರೆಗೆ ಪಾದಯಾತ್ರೆ ಕೈಗೊಂಡಿರುವ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅಭಿಮಾನಿಗಳು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಆದ ವಿನಾಯಕ ಹಳ್ಳಿ ಮತ್ತು ಗೌಸ ಐನಾಪೂರಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾದೇವ ಪಟೋಳಿಯವರು ಇವರು ತಮ್ಮ ಪ್ರಾಮಾಣಿಕ ಸ್ವ ಇಚ್ಛೆಯಿಂದ ಪಾದಯಾತ್ರೆ ಕೈಗೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು ಇವರಿಗೆ ಆಯುಷ್ಯ ಆರೋಗ್ಯ ದಯಪಾಲಿಸಲಿ ಇವರ ಕಾರ್ಯ ಯಶಸ್ವಿಯಾಲೇಂದು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಸವರಾಜ ಅತ್ತೀಮರದ ಮಾರುತಿ ಜಿನರಾಳಿ ಶಂಕರ ಜಾಧವ ಸಂತೋಷ ಕರೋಶಿ ಅನೀಲ ಜಾಧವ ಸುರೇಶ ಕರೋಶಿ ಪ್ರಕಾಶ್ ಬಾವನ್ನವರ ಹಾಗೂ ಆನಂದಪೂರ ಗ್ರಾಮದ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.