ರಮೇಶ್ ಜಾರಕಿಹೊಳಿ ಒಂದು ಸರಕಾರವನ್ನು ಬೀಳಿಸಿ ಮತ್ತೊಂದು ಸರಕಾರ ರಚಿಸಲು ಪ್ರಮುಖ ಕಾರಣ ರಾದ ರಮೇಶ್ ಜಾರಕಿಹೊಳಿ ಪ್ರತಿದಿನ ಒಂದು ಹೊಸ ವಿಷಯ ದೊಂದಿಗೆ ಚರ್ಚೆ ಯಲ್ಲಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಇಂದು ಮಧ್ಯಾಹ್ನ ಸಡನ್ ಆಗಿ ದೆಹಲಿಗೆ ಹಾರಿದ್ದಾರೆ.
ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ,
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದಿದ್ದ ಸಾಹುಕಾರರು ಮಧ್ಯಾಹ್ನ ಮುಖ್ಯ ಮಂತ್ರಿಗಳನ್ನಾ ಭೇಟಿ ಮಾಡಿ ದೆಹಲಿಗೆ ಹಾರಿದ್ದಾರೆ.
ಹೌದು ನಿನ್ನೆ ರಮೇಶ್ ಜಾರಕಿಹೊಳಿ ಅವರಿಗೆ ರಾತ್ರಿ ದೆಹಲಿಯಿಂದ ಕರೆ ಬಂದಿದೆ ಅಂತೆ ದೆಹಲಿಗೆ ತಲುಪಿದ ಅವರು ಅಲ್ಲಿನ ಸುದ್ದಿ ಗಾರ ರೊಂದಿಗೆ ಮಾತನಾಡಿ ,ನನಗೆ ಯಡಿಯೂರಪ್ಪ ನವಾರಿಂದ ಅನ್ಯಾಯ ವಾಗಿಲ್ಲ ಬಿಜೆಪಿಯ ಮೂವರು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರಿಗೆ ಬಹಿರಂಗ ವಾಗು ತಕ್ಕ ಪಾಠ ಕಲಿಸುತ್ತೇನೆ ಎಂದು ಕೂಡ ಹೇಳಿದ್ದಾರೆ.
ಆದರೆ ಅವರು ಯಾರು ಅನ್ನೋದನ್ನ ಮಾತ್ರ ಸಾಹುಕಾರರು ಹೇಳಿಲ್ಲ.
ಇನ್ನು ದೆಹಲಿಯಲ್ಲಿ ಯಾರನ್ನ ಭೇಟಿ ಯಾಗಲೂ ಬಂದಿದ್ದೀರಿ ಎಂಬ ಪತ್ರ ಕರ್ತರ ಪ್ರಶ್ನೆಗೆ ಸಾಹುಕಾರ ಕಾದು ನೋಡಿ ಕೆಲವೇ ಘಂಟೆ ಗಳಲ್ಲಿ ಎಲ್ಲ ಬಹಿರಂಗ ಪಡಿಸುತ್ತೇನ ಎಂದು ಹೇಳಿದ್ದಾರೆ
ರಮೇಶ್ ಜಾರಕಿಹೊಳಿ ಒಂದು ಸಾರಿ ಒಂದು ಕೆಲಸವನ್ನ ಕೈಗೆತ್ತಿ ಕೊಂಡರೆ ಅದನ್ನ ಬಿಡುವ ಮಾತೇ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಇನ್ನು ಕೆಲವೇ ಹೊತ್ತಿನಲ್ಲಿ ಸಾಹುಕಾರ ಏನು ಬ್ರೇಕಿಂಗ್ ನ್ಯೂಸ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..