Breaking News
Home / ಜಿಲ್ಲೆ / ಬೆಂಗಳೂರು / ಕೊರೊನಾ ರೋಗಿಯನ್ನ ಕೊಲೆಗೈದಿದ್ದಾರೆಂದು ಫೇಕ್ ವಿಡಿಯೋ ಅಪ್ಲೋಡ್ ಮಾಡಿದ ಯುವಕನಿಂದ ಕ್ಷಮೆ ಯಾಚನೆ

ಕೊರೊನಾ ರೋಗಿಯನ್ನ ಕೊಲೆಗೈದಿದ್ದಾರೆಂದು ಫೇಕ್ ವಿಡಿಯೋ ಅಪ್ಲೋಡ್ ಮಾಡಿದ ಯುವಕನಿಂದ ಕ್ಷಮೆ ಯಾಚನೆ

Spread the love

ಬೆಂಗಳೂರು: ಕೊರೊನಾ ಸೋಂಕು ಪ್ರಕರಣಗಳ ಏರಿಕೆ ಜನರನ್ನ ಆತಂಕಕ್ಕೀಡುಮಾಡಿದೆ. ಇಂಥ ಹೊತ್ತಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳನ್ನ ಹರಿಬಿಟ್ಟು ಜನರ ದಾರಿ ತಪ್ಪಿಸುತ್ತಿರೋದು ಬೆಳಕಿಗೆ ಬಂದಿದೆ.

ಕೊರೊನಾ ಆಸ್ಪತ್ರೆಯೊಂದರಲ್ಲಿ ದುಡ್ಡಿಗಾಗಿ ರೋಗಿಯ ಕತ್ತುಹಿಸುಕು ಸಾಯಿಸಿದ್ದಾರೆ ಎನ್ನಲಾದ ವಿಡಿಯೋ, ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಡಿಯೋ ತುಣುಕು ಜೊತೆಗೆ ಯುವತಿಯೊಬ್ಬಳು ತನ್ನ ತಂದೆಯನ್ನ ಕಳೆದುಕೊಂಡು ರೋಧಿಸಿದ್ದ ವಿಡಿಯೋವನ್ನ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದೀಗ ವೈರಲ್ ಆಗಿದೆ.

ಇದ್ರಲ್ಲಿ ನಿಜ ಎಷ್ಟು, ಸುಳ್ಳು ಎಷ್ಟು ಅನ್ನೋ ಬಗ್ಗೆ ನಿನ್ನೆ ನ್ಯೂಸ್​ಫಸ್ಟ್​ ವರದಿಯೊಂದನ್ನ ಪ್ರಕಟಿಸಿದೆ. ಕರ್ನಾಟಕ ಪೊಲೀಸ್​ ಇಲಾಖೆ ಕೂಡ ತನ್ನ ವೆಬ್​ಸೈಟ್​​ನಲ್ಲಿ ಫ್ಯಾಕ್ಟ್​ ಚೆಕ್​ ಮಾಡಿ, ಇಂಥ ವದಂತಿಗಳನ್ನ ನಂಬಿ ಯಾಮಾರಬೇಡಿ ಎಂದು ಎಚ್ಚರಿಕೆ ನೀಡಿದೆ. ಅಸಲಿಗೆ ಈ ವಿಡಿಯೋದಲ್ಲಿರೋ ಎರಡು ದೃಶ್ಯಗಳು ಕರ್ನಾಟಕದ್ದಲ್ಲ. ಮೂರು ಬೇರೆ ಬೇರೆ ವಿಡಿಯೋಗಳನ್ನ ಸೇರಿಸಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಅನ್ನೋದನ್ನ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

  • ವ್ಯಕ್ತಿಯೊಬ್ಬ ರೋಗಿಯ ಕತ್ತುಹಿಸುಕುತ್ತಿರೋ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, 2020ರ ಮೇ 19ರಂದು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿತ್ತು. ಅದ್ರಲ್ಲಿರೋ ವ್ಯಕ್ತಿ ಕೊರೊನಾ ರೋಗಿಯಲ್ಲ.
  • ಮತ್ತೊಂದು ವಿಡಿಯೋ ಪಟಿಯಾಲಾದ್ದು. ಖಾಸಗಿ ಆಸ್ಪತ್ರೆ ಸಿಬ್ಬಂದಿ, ಖಿನ್ನತೆಗೆ ಒಳಗಾಗಿದ್ದ ರೋಗಿಯನ್ನ ನಿಯಂತ್ರಿಸುತ್ತಿರೋ ದೃಶ್ಯ ಇದಾಗಿದ್ದು, ಈ ಘಟನೆ ಸಂಬಂಧ ಅಲ್ಲಿನ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
  • ಇನ್ನು ಯುವತಿ ಅಳುತ್ತಿರುವ ದೃಶ್ಯ ಬೆಂಗಳೂರಿನ ಆಕ್ಸ್​​ಫರ್ಡ್​​ ಆಸ್ಪತ್ರೆಯದ್ದಾಗಿದೆ. ಸ್ವತಃ ನ್ಯೂಸ್​​ಫಸ್ಟ್​ ಪ್ರತಿನಿಧಿ ಆ ಯುವತಿಯನ್ನ ಮಾತಾಡಿಸಿದ್ದರು. ಆ ದೃಶ್ಯಕ್ಕೂ ಮೇಲಿನ ಎರಡು ವಿಡಿಯೋಗಳಿಗೂ ಲಿಂಕ್ ಇಲ್ಲ.

Mahanayak_kannada ಎಂಬ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಈ ಫೇಕ್​ ವಿಡಿಯೋವನ್ನ ಅಪ್​ಲೋಡ್​ ಮಾಡಿದ್ದ ಯುವಕ ಕ್ಷಮೆ ಯಾಚಿಸಿದ್ದಾನೆ. ನಾನು ವಿಡಿಯೋ ಹಾಕುವ ಮುನ್ನ ಪರಿಶೀಲಿಸದೇ ಅಪ್​ಲೋಡ್​ ಮಾಡಿದ್ದರಿಂದ ಕ್ಷಮೆ ಯಾಚಿಸುತ್ತೇನೆ. ರೋಗಿಯನ್ನ ಸಾಯಿಸಲು ಯತ್ನಿಸುತ್ತಿರುವ ವಿಡಿಯೋಗೂ, ತನ್ನ ತಂದೆಯನ್ನ ಕಳೆದುಕೊಂಡು ದುಃಖದಲ್ಲಿರೋ ಮಹಿಳೆಗೂ ಸಂಬಂಧವಿಲ್ಲ. ಸತ್ಯ ಗೊತ್ತಾದ ನಂತರ ಆ ವಿಡಿಯೋವನ್ನ ನಾನು ಡಿಲೀಟ್​ ಮಾಡಿದ್ದೇನೆ. ಯಾರೂ ಆ ವಿಡಿಯೋ ಶೇರ್ ಮಾಡಬೇಡಿ ಎಂದು ಯುವಕ ಕೇಳಿಕೊಂಡಿರೋದಾಗಿ ಕರ್ನಾಟಕ ಪೊಲೀಸ್​ ವೆಬ್​ಸೈಟ್​​ನಲ್ಲಿ ತಿಳಿಸಿದೆ. ಹೀಗಾಗಿ ಜನರು ಇಂಥ ಸುಳ್ಳು ವದಂತಿಗಳನ್ನ ನಂಬಬೇಡಿ ಎಂದು ಎಚ್ಚರಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ