ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸಿ.ಡಿ ಕೇಸ್ ಕ್ಷಣಕ್ಷಣಕ್ಕೂ ಕುತೂಹಲದ ತಿರುವು ಪಡೆದುಕೊಳ್ಳುತ್ತಿದೆ. ಇದಾಗಲೇ ಕೆಲವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಇನ್ನು ಕೆಲವರಿಗಾಗಿ ಜಾಲ ಬೀಸಿದ್ದಾರೆ.
ಈ ನಡುವೆಯೇ ಸಿ.ಡಿಯಲ್ಲಿ ಇರುವ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿಗೂ ತನಿಖಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಘಟನೆಯ ನಂತರದ ಬೆಳವಣಿಗೆಗಳ ಬಳಿಕ ಕಾಣೆಯಾಗಿದ್ದ ಯುವತಿ, ಕೊನೆಗೂ ಸಿಕ್ಕಿದ್ದು, ಆಕೆಯನ್ನು ವಿಚಾರಣೆ ಮಾಡುವ ಸಲುವಾಗಿ ನೋಟಿಸ್ ಜಾರಿಗೊಳಿಸಲಾಗಿದೆ.
ಈ ನಡುವೆಯೇ ಈ ಯುವತಿಯ ಕುರಿತು ಕೆಲವೊಂದು ಕುತೂಹಲದ ಮಾಹಿತಿಗಳು ಲಭ್ಯವಾಗಿವೆ. ಅದೇನೆಂದರೆ ಈಕೆ ಉತ್ತರ ಕರ್ನಾಟಕದವಳು. ಈಕೆ ಯುವಕನೊಬ್ಬನನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಮೂರು ತಿಂಗಳ ಹಿಂದಷ್ಟೇ ಇವರ ಮದುವೆಯ ಮಾತುಕತೆಯೂ ನಡೆದಿತ್ತು. ಆದರೆ ಈ ನಡುವೆಯೇ ಸಿ.ಡಿ ಕೇಸ್ನಲ್ಲಿ ಯುವತಿ ಸಿಲುಕಿದ್ದಾಳೆ.
ಅಂದ ಹಾಗೆ ಈಕೆ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾಳೆ. ಐದು ವರ್ಷದ ಹಿಂದೆ ಆ ಯುವಕನ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಮದುವೆಯವರೆಗೂ ಮಾತುಕತೆ ನಡೆದಿತ್ತು.
3 ತಿಂಗಳ ಹಿಂದೆ ಇಬ್ರೂ ಮದುವೆ ಆಗೋಣ ಅಂತ ನಿರ್ಧರಿಸಿದ್ದರು. ಈ ಕುರಿತು ಯುವಕ ತನ್ನ ಮನೆಯಲ್ಲೂ ವಿಚಾರ ಹೇಳಿದ್ದ. ಈ ಹಿನ್ನೆಲೆಯಲ್ಲಿ ಯುವಕನ ಮನೆಯವರ ಜತೆಗೂ ಯುವತಿ ಸಂಪರ್ಕದಲ್ಲಿದ್ದಳು. ಈ ಎಲ್ಲಾ ವಿಷಯಗಳು ಇದೀಗ ಎಸ್ಐಟಿ ತಂಡಕ್ಕೆ ತಿಳಿದುಬಂದಿದ್ದು, ಸಂತ್ರಸ್ತೆಯ ಕೆಲ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.