ಬೆಂಗಳೂರು : ನನಗೆ ಯುವತಿ ಪರಿಚಯವೇ ಇಲ್ಲ, ಯಾವುದೇ ಸಂಪರ್ಕವೂ ಇಲ್ಲ. ನನಗೆ ಸಂತ್ರಸ್ತ ಯುವತಿಯ ಕುಟುಂಬದ ಸದಸ್ಯರೊಬ್ಬರು ಪರಿಚಯ. ಅವರೇ ನನಗೆ ಸಿಡಿ ಕೊಟ್ಟಿದ್ದಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂಬಂಧ ಇಂದು ವಿಚಾರಣೆಗೆ ದೂರುದಾರ ದಿನೇಶ್ ಕಲ್ಲಳ್ಳಿ ಹಾಜರಾದರು. ಇಂತಹ ಅವರನ್ನು ಡಿಸಿಪಿ ಅನುಚೇತ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಸತತ 4 ಗಂಟೆಗಳ ಕಾಲ ಎರಡು ಬಾರಿ ದಿನೇಶ್ ಕಲ್ಲಳ್ಳಿಯವರನ್ನು ಪ್ರಕರಣ ಕುರಿತಂತೆ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆ ಮುಗಿಸಿ ಹೊರ ಬಂದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಯುವತಿಯ ಪರಿಚಯವಿಲ್ಲ. ಅವರೊಂದಿಗೆ ಯಾವುದೇ ಸಂಪರ್ಕ ಕೂಡ ಇಲ್ಲ. ನನಗೆ ಯುವತಿಯ ಕುಟುಂಬದ ಸದಸ್ಯರೊಬ್ಬರು ಪರಿಚಯ. ಯುವತಿಯ ಕುಟುಂಬಸ್ಥರೇ ನನಗೆ ಸಿಡಿ ಕೊಟ್ಟಿದ್ದು. ದೂರಿನಲ್ಲಿ ನೀಡಿದ ಮಾಹಿತಿಯನ್ನೇ ಹೇಳಿರುವೆ. ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನು ನೀಡಿರುವೆ. ಮೊದಲು ಕೊಟ್ಟ ದೂರಿನಂತೆ ಈಗಲೂ ಬದ್ಧವಾಗಿದ್ದೇನೆ. ತನಿಖೆಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡಿರುವೆ ಎಂಬುದಾಗಿ ಹೇಳಿದರು.