ಕರೋಣದಿಂದಾಗಿ ಈ ಭಾರಿ ಜನರು ಜೀವ ಕಳೆದುಕೊಂಡು ಜೀವನ ನರಕಯಾತನೆ ಅನುಭವಿಸುತ್ತಿದ್ದಾರೆ..ಮನೆ ಮಾಡಿಕೊಳ್ಳಲು ಮರಳು ಸಿಗದಂತಾ ಪರಿಸ್ಥಿತಿ ನಿರ್ಮಾಣವಾಗಿದೆ…ಆದ್ರೆ ಕೆಲವರು ಇದನ್ನೆ ಸದ್ಬಳಿಕೆ ಮಾಡಿಕೊಂಡು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ.ಹೌದು ಅಕ್ರಮವಾಗಿ ಕೃತಕ ಮರಳು ತಯಾರಿಕೆಗಳನ್ನು ಮಾಡಿಕೊಂಡು ಜನರ ಫಲವತ್ತಾದ ಜಮೀನುಗಳನ್ನ ನಾಶಮಾಡುತ್ತಿರುವ ದೃಶ್ಯ ಕಂಡು ಬರೋದು ಬಾಗಲಕೋಟ ಜಿಲ್ಲೆಯ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನಾದ್ಯತ ನಡೆದಿದೆ.ಬನಹಟ್ಟಿ ತಾಲೂಕಿನ ಬಂಡಿಗಣ್ಣಿ ಕ್ರಾಸ್ ಹತ್ತಿರ ಪ್ರಕಾಶ್ ಜಂಬಗಿ ಎಂಬಾತ ಹೊರವಲಯದ ಜಮೀನುಗಳಲ್ಲಿ ಅಕ್ರಮವಾಗಿ ಕೃತಕ ಮರಳು ತಯಾರಿಸಿ ೧ ಬ್ರಾಸ್ ಮರಳಿಗೆ ೬-೧೦ ಸಾವಿರ ರೂಪಾಯಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಅಲ್ಲದೇ ಅರಣ್ಯ ಪ್ರದೇಶಗಳಲ್ಲಿನ ಮಣ್ಣು ತಂದು ಅದನ್ನ ಕೃತಕ ಮರಳಾಗಿ ಪರಿವರ್ತಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ..
ಸರ್ಕಾರ ಬದಾಮಿ ತಾಲೂಕಿನಲ್ಲಿ ಮರಳು ಲೀಜ್ ಪಾಯಿಂಟಗಳಿದರು ಕೂಡ ಅವು ಸರ್ಕಾರಿ ಕಾಮಗಾರಿಗಳಿಗೆ ಅಂತ ಹೇಳು ಬಡವರ ಹಣ ದೊಚ್ಚಲು ಮುಂದಾಗಿದ್ದಾರೆ…ಇಂತಹ ಅಕ್ರಮ ಕೃತಕ ಮರಳು ಅಡ್ಡೆಗಳ ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ಇದ್ರು…ಅವರ ಕೊಡುವ ಬಿಡಿಗಾಸಿಗಾಗಿ ಕಂಡುಕಾಣದಂತೆ ಅಧಿಕಾರಿಗಳು ಕುರುಡು ಜಾನತನ ಪ್ರದರ್ಶನ ನಡೆಸಿದ್ದಾರೆ..ಇನಾದ್ರೂ ಅಧಿಕಾರಿಗಳು ಎಚ್ಚೆತುಕೊಂಡು ಇಂತಹ ಅಡ್ಡೆಗಳಿಗೆ ಕಡಿವಾಣ ಹಾಕಿ. ಲೀಜ್ ಪಾಯಿಂಟಗಳ ಮೂಲಕ ಜನಸಾಮಾನ್ಯರಿಗೆ ಮರಳು ಒದಗಿಸಲು ಮುಂದಾಗಬೇಕಿದೆ.
ವರದಿ :- ಶ್ಯಾಮ್ ತಳವಾರ ಬಾಗಲಕೋಟೆ