ಇದು ಕೇವಲ ಕ್ರೀಡೆಯಲ್ಲ, ತುಳುನಾಡಿನ ಮಣ್ಣಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ನಡೆಯುತ್ತಿರುವ ನರಿಂಗಾನ ಲವ-ಕುಶ ಜೋಡುಕರೆ ಕಂಬಳವು ಕಣ್ಮನ ಸೆಳೆಯಿತು. ವೆಂಕಪ್ಪ ಕಾಜವರ ಅವರ ನಾಯಕತ್ವದಲ್ಲಿ ಊರವರೆಲ್ಲರೂ ಸೇರಿ ಸಂಘಟಿಸಿರುವ ಈ ಕಂಬಳವು ಕರಾವಳಿ ಭಾಗದ ಸೊಗಡನ್ನು ಎತ್ತಿ ಹಿಡಿಯುತ್ತಿದೆ. ಕೆಸರ ರಾಶಿಯಲ್ಲಿ ಕೋಣಗಳ ಹೆಜ್ಜೆ ಸದ್ದು ಕಿವಿಗೆ ಸಂಗೀತದಂತೆ ಆಹ್ಲಾದ ನೀಡಿತು.
ಈ ವೇಳೆ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್, ಎಸ್ ಸಿಡಿಸಿಸಿ ಅಧ್ಯಕ್ಷರಾದ ಡಾ.ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
#ನರಿಂಗಾನ | #ಕಂಬಳ
Laxmi News 24×7