ಮದುವೆಯನ್ನು ಸಮಾಜ ಸೇವೆಯ ವೇದಿಕೆಯಾಗಿಸಿದ ವರ..!
ಸಾಮಾನ್ಯವಾಗಿ ಮದುವೆ ಎಂದರೆ ದುಬಾರಿ ಉಡುಗೊರೆಗಳು, ಅದ್ಧೂರಿ ಸಂಭ್ರಮವೇ ಹೆಚ್ಚು ಸುದ್ದಿಯಾಗುತ್ತದೆ. ಆದರೆ ಸಿದ್ಧೇಶ್ವರ್ ಪೇಠ್ಕರ್ ಮತ್ತು ಅವರ ಕುಟುಂಬ ತಮ್ಮ ಮದುವೆಯನ್ನು ಸಮಾಜ ಸೇವೆಯ ಮೂಲಕ ಮಾದರಿಯನ್ನಾಗಿ ಮಾಡಿದ್ದಾರೆ.
ಮದುವೆಯ ಸಂದರ್ಭದಲ್ಲಿ ದುಬಾರಿ ಉಡುಗೊರೆಗಳನ್ನು ಸ್ವೀಕರಿಸುವ ಅಥವಾ ನೀಡುವ ಬದಲು, ತಮ್ಮ ಗ್ರಾಮದ 3,465 ನಿವಾಸಿಗಳಿಗೆ ತಲಾ ₹1 ಲಕ್ಷ ಮೊತ್ತದ ಒಂದು ವರ್ಷದ ಅಪಘಾತ ವಿಮೆ ಮಾಡಿಸಿಕೊಟ್ಟಿದ್ದಾರೆ.
ಇದರಿಂದ ಗ್ರಾಮದ ಜನರಿಗೆ ಒಟ್ಟಾರೆ ಸುಮಾರು ₹33.6 ಕೋಟಿ ವಿಮಾ ರಕ್ಷಣೆ ಲಭ್ಯವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಂಭವಿಸುವ ಹಾವು ಕಚ್ಚುವುದು, ಸಿಡಿಲು ಬಡಿತ, ಕೃಷಿ ಕೆಲಸದ ವೇಳೆ ಸಂಭವಿಸುವ ಅಪಘಾತಗಳು ಸೇರಿದಂತೆ ವಿವಿಧ ಅನಾಹುತಗಳಿಂದ ಸಂಕಷ್ಟಕ್ಕೆ ಸಿಲುಕುವ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಈ ವಿಮೆ ಮಾಡಿಸಲಾಗಿದೆ.
ಮದುವೆಯನ್ನು ಸಮಾಜದ ಒಳಿತಿಗಾಗಿ ಬಳಸಿದ ಈ ಅಪರೂಪದ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೂ ಇದು ಮಾದರಿಯಾಗಲಿ ಎಂದು ಹಲವರು ಶ್ಲಾಘಿಸಿದ್ದಾರೆ.
Laxmi News 24×7