Breaking News

ವಿಶ್ವಕಪ್​ ಕ್ರಿಕೆಟ್​: ಕಮರಿದ ಶ್ರೀಲಂಕಾ ಸೆಮೀಸ್​ ಕನಸು.. ಬಾಂಗ್ಲಾಕ್ಕೆ 3 ವಿಕೆಟ್​ ಜಯ​

Spread the love

ನವದೆಹಲಿ: ಲಂಕಾಗೆ ದೆಹಲಿಯ ಫಿರೋಜ್​ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದಿದ್ದರೆ, ಅದೃಷ್ಟವಶಾತ್ ಸೆಮೀಸ್​ಗೆ ನಾಲ್ಕನೇ ತಂಡವಾಗಿ ಪ್ರವೇಶಿಸುವ ಅವಕಾಶ ಇತ್ತು.

ಆದರೆ, ಬಾಂಗ್ಲಾ ಟೈಗರ್ಸ್​ ಸಿಂಹಳೀಯರ ಈ ಕನಸನ್ನು ಭಗ್ನ ಮಾಡಿದ್ದಾರೆ. ಶ್ರೀಲಂಕಾ ನೀಡಿದ್ದ 279 ರನ್​ಗಳ ಗುರಿಯನ್ನು ಬಾಂಗ್ಲಾದೇಶ 41.1 ಓವರ್​ಗೆ 3 ವಿಕೆಟ್​ ಉಳಿಸಿಕೊಂಡು ಜಯ ದಾಖಲಿಸಿದೆ.

ವಿಶ್ವಕಪ್​​ನಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿತ್ತು. ಈಗ ಶ್ರೀಲಂಕಾವನ್ನು ಮಣಿಸಿ ಅವರನ್ನು ವಿಶ್ವಕಪ್​ ಸೆಮೀಸ್​ ರೇಸ್​ನಿಂದ ಹೊರಕ್ಕೆ ತಂದಿದೆ. ಇದರಿಂದ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಅಲಂಕರಿಸಿದ್ದು, 2025ರ ಚಾಂಪಿಯನ್ಸ್​ ​ಟ್ರೋಫಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

 

 

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಶ್ರೀಲಂಕಾ ಬಾಂಗ್ಲಾ ಬೌಲರ್​ಗಳ ಮುಂದೆ ಬ್ಯಾಟಿಂಗ್​ ಪಿಚ್​ನಲ್ಲಿ ಕಷ್ಟಪಟ್ಟು ಆಡಿತ್ತು. ಚರಿತ್ ಅಸಲಂಕಾ ಶತಕ ಮತ್ತು ಪಾತುಮ್ ನಿಸ್ಸಾಂಕ (41), ಸದೀರ ಸಮರವಿಕ್ರಮ (41) ಇನ್ನಿಂಗ್ಸ್​ ಬಲದಿಂದ ತಂಡ 49.3 ಓವರ್​ಗೆ ಆಲ್​ಔಟ್​ಗೆ ಶರಣಾಗಿ 280 ರನ್​ಗಳ ಗುರಿಯನ್ನು ನೀಡಿತ್ತು. ಬೆನ್ನಟ್ಟಿದ ಬಾಂಗ್ಲಾದೇಶ ಮೊದಲ ವಿಕೆಟ್​ನ್ನು ಬೇಗ ಕಳೆದುಕೊಂಡರೂ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ ಇನ್ನಿಂಗ್ಸ್​ ಬಲದಿಂದ 3 ವಿಕೆಟ್​ಗಳ ಜಯ ದಾಖಲಿಸಿತ್ತು.

ತಂಜಿದ್ ಹಸನ್ ದಿಲ್ಶನ್ ಮಧುಶಂಕ ಬೌಲಿಂಗ್​ನಲ್ಲಿ ವಿಕೆಟ್​ ಕೊಟ್ಟರು. ಇದರಿಂದ 17 ರನ್​ಗೆ ಬಾಂಗ್ಲಾ ತನ್ನ ಮೊದಲ ವಿಕೆಟ್​ ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ (23) ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ಆದರೆ, ಮೂರನೇ ವಿಕೆಟ್​ಗೆ ಒಂದಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ 169 ರನ್​ ಜೊತೆಯಾಟ ನೀಡಿದ್ದರು. ಇವರ ಪಾಲುದಾರಿಕೆಯಿಂದ ತಂಡ ಗೆಲುವು ಹೆಚ್ಚು ಕಡಿಮೆ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂತು. ​

ಇಬ್ಬರೂ ಆಟಗಾರರು ಶತಕದ ಅಂಚಿನಲ್ಲಿ ಎಡವಿರು. 65 ಬಾಲ್​ ಆಡಿ 12 ಬೌಂಡರಿ ಮತ್ತು 2 ಸಿಕ್ಸ್​ನಿಂದ 85 ರನ್​ ಗಳಿಸಿ ನಾಯಕ ಶಕೀಬ್​ ಅಲ್ ಹಸನ್​ ಔಟ್ ಆದರು. 15 ರನ್​ನಿಂದ ಹಸನ್​ ಶತಕ ವಂಚಿತರಾದರು, ಅವರಂತೆ ಶಾಂಟೊ ಸಹ 10 ರನ್​ನಿಂದ ಶತಕ ಮಾಡುವ ಅವಕಾಶ ಕಳೆದುಕೊಂಡರು. ನಜ್ಮುಲ್ ಹೊಸೈನ್ ಶಾಂಟೊ ಇನ್ನಿಂಗ್ಸ್​ನಲ್ಲಿ 101 ಬಾಲ್ ಆಡಿ 12 ಬೌಂಡರಿಯಿಂದ 90 ರನ್​ ಗಳಿಸಿ ವಿಕೆಟ್​ ಕೊಟ್ಟರು.

 

 

ಈ ಎರಡು ವಿಕೆಟ್​ ನಂತರ ಮುಶ್ಫಿಕರ್ ರಹೀಮ್ (10), ಮಹಮ್ಮದುಲ್ಲಾ (22), ಮೆಹಿದಿ ಹಸನ್ ಮಿರಾಜ್ (3) ಔಟ್​ ಆದರೆ, ತೌಹಿದ್ ಹೃದಯೊಯ್ (15*) ಮತ್ತು ತನ್ಜಿಮ್ ಹಸನ್ ಸಾಕಿಬ್ (5*) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯದರು. ಇದರಿಂದ 41.1 ಓವರ್​ಗೆ 7 ವಿಕೆಟ್​ ಕಳೆದುಕೊಂಡು ಬಾಂಗ್ಲಾ 282 ರನ್​ ಗಳಿಸಿ ಪಂದ್ಯ ಗೆದ್ದುಕೊಂಡಿತು. ಲಂಕಾ ಪರ ದಿಲ್ಶನ್ ಮಧುಶಂಕ 3, ಏಂಜೆಲೊ ಮ್ಯಾಥ್ಯೂಸ್ ಮತ್ತು ಮಹೇಶ್ ತೀಕ್ಷ್ಣ ತಲಾ ಎರಡು ವಿಕೆಟ್​ ಪಡೆದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ