Breaking News
Home / ರಾಜಕೀಯ / ‘ಶಬರಿಮಲೆ’ಗೆ ತೆರಳೋ ‘ಅಯ್ಯಪ್ಪನ ಭಕ್ತ’ರಿಗೆ ಗುಡ್ ನ್ಯೂಸ್: KSRTCಯಿಂದ ‘ರಾಜಹಂಸ, ವೋಲ್ವೋ ಬಸ್’ ಸಂಚಾರ ವ್ಯವಸ್ಥೆ

‘ಶಬರಿಮಲೆ’ಗೆ ತೆರಳೋ ‘ಅಯ್ಯಪ್ಪನ ಭಕ್ತ’ರಿಗೆ ಗುಡ್ ನ್ಯೂಸ್: KSRTCಯಿಂದ ‘ರಾಜಹಂಸ, ವೋಲ್ವೋ ಬಸ್’ ಸಂಚಾರ ವ್ಯವಸ್ಥೆ

Spread the love

ಬೆಂಗಳೂರು: ಕರ್ನಾಟಕದಿಂದ ( Karnataka ) ಶಬರಿಮಲೆಯ ಅಯ್ಯಪ್ಪ ಸ್ವಾಮಿ (Sabarimala Ayyappa Swamy ) ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯಿಂದ ಶಬರಿಮಲೆಗೆ ರಾಜಹಂಸ, ವೋಲ್ವೋ ಬಸ್ ( KSRTC Rajahamsa, Volvo Bus ) ಸಂಚಾರದ ವ್ಯವಸ್ಥೆಯನ್ನು ಮಾಡಿದೆ.

 

 

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( Karnataka State Road Transport Corporation – KSRTC ), ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 01-12-2022ರಿಂದ ಹೊಸದಾಗಿ ಬೆಂಗಳೂರು – ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದಿದೆ.

 

ಹೀಗಿದೆ KSRTC ರಾಜಹಂಸ ಬಸ್ ವೇಳಾಪಟ್ಟಿ ಹಾಗೂ ಪ್ರಯಾಣದರ

  • ದಿನಾಂಕ 01-12-2022ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ. ಬೆಳಿಗ್ಗೆ 8.15ಕ್ಕೆ ನೀಲಕ್ಕಲ್ ಅಂದರೇ ಪಂಪಾ ಶಬರಿಮಲೆಯನ್ನು ತಲುಪಲಿದೆ.
  • ಇನ್ನೂ ಮರುದಿನ ಸಂಜೆ 5 ಗಂಟೆಗೆ ನೀಲಕ್ಕಲ್ ನಿಂದ ಹೊರಡಲಿರುವಂತ ಕೆ ಎಸ್ ಆರ್ ಟಿಸಿ ರಾಜಹಂಸ ಬಸ್, ಬೆಂಗಳೂರನ್ನು ಮರುದಿನ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.
  • ಬೆಂಗಳೂರು- ನೀಲಕ್ಕಲ್ ರಾಜಹಂಸ ಬಸ್ ಸಂಚಾರದ ಪ್ರಯಾಣ ದರವನ್ನು ವಯಸ್ಕರಿಗೆ ರೂ.1,150 ನಿಗದಿ ಪಡಿಸಲಾಗಿದೆ.

ಹೀಗಿದೆ ಕೆ ಎಸ್ ಆರ್ ಟಿ ಸಿ ವೋಲ್ವೋ ಬಸ್ ( KSRTC Volvo Bus ) ವೇಳಾಪಟ್ಟಿ ಹಾಗೂ ಪ್ರಯಾಣದರ

  • ದಿನಾಂಕ 01-12-2023ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಬಸ್ ಹೊರಟು, ನೀಲಕ್ಕಲ್ ಅನ್ನು ಬೆಳಿಗ್ಗೆ 6.45ಕ್ಕೆ ತಲುಪಲಿದೆ.
  • ನೀಲಕ್ಕಲ್ ನಿಂದ ಸಂಜೆ 6 ಗಂಟೆಗೆ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಹೊರಟು, ಬೆಂಗಳೂರಿನ್ನು ಮರುದಿನ ಬೆಳಿಗ್ಗೆ 9.45ಕ್ಕೆ ತಲುಪಲಿದೆ.
  • ಬೆಂಗಳೂರು-ನೀಲಕ್ಕಲ್ ನ ವೋಲ್ವೋ ಬಸ್ ಪ್ರಯಾಣಕ್ಕೆ ದರವನ್ನು ರೂ.1,490 ನಿಗದಿ ಪಡಿಸಲಾಗಿದೆ.

Spread the love

About Laxminews 24x7

Check Also

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಜೋಶಿ

Spread the love ಹುಬ್ಬಳ್ಳಿ : ಮುಸ್ಲಿಂ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ