ಪಣಜಿ: ಗೋವಾದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 22 ಕ್ಷೇತ್ರಗಳಲ್ಲಿ ಶಿವಸೇನೆಯು ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಫರ್ಧಿಸಲಿದೆ ಎಂದು ಸಂಜಯ್ ರಾವುತ್ ಬುಧವಾರ ಹೇಳಿಕೆ ನೀಡಿದ್ದಾರೆ.
ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಸೇನೆಯ ಪ್ರಭಾರಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವ ರನ್ನು ಗೋವಾ ಶಿವಸೇನೆಯ ಪ್ರಮುಖ ಜಿತೇಶ್ ಕಾಮತ್ ಹಾಗೂ ಸುಭಾಷ ಕೇರಕರ್ ರವರು ಸ್ವಾಗತಿಸಿದರು .
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಂಜಯ್ ರಾವುತ್, ‘ಗೋವಾ ಮತ್ತು ಮಹಾರಾಷ್ಟ್ರಕ್ಕೆ ಒಂದು ಭಾವನಾತ್ಮಕ ಸಂಬಂಧವಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಯಾವ ಪದ್ಧತಿಯಲ್ಲಿ ರಾಜ್ಯಭಾರ ನಡೆಸುತ್ತಿದೆಯೋ ಅದೇ ಪದ್ಧತಿಯಲ್ಲಿ ಗೋವಾದಲ್ಲಿಯೂ ಶಿವಸೇನೆ ರಾಜ್ಯಭಾರ ನಡೆಸಲಿದೆ. ಗೋವಾದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 22 ಕ್ಷೇತ್ರಗಳಲ್ಲಿ ಶಿವಸೇನೆಯು ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆಯೇ ಸ್ವತಂತ್ರವಾಗಿ ಸ್ಫರ್ಧಿಸಲಿದೆ’ ಎಂದರು.
ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರೊಂದಿಗೆ ಬೈಠಕ್ ನಡೆಸಲಾಗುತ್ತಿದೆ.