ಹಾಸನ: ಕೋವಿಡ್ ಲಸಿಕೆ ವಿತರಣೆ ಕೇಂದ್ರವನ್ನ ಕ್ಲೋಸ್ ಮಾಡದಂತೆ ಹೇಳಿದ ನಗರಸಭೆ ಆಯುಕ್ತರ ಮೇಲೆ ಕಾಲೇಜು ಮಾಲೀಕರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಇಂದು ದೇಶಾದ್ಯಂತ ಬೃಹತ್ ಲಸಿಕಾ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅದರ ನಿಮಿತ್ತ ಹೇಮಾವತಿನಗರದಲ್ಲಿನ ಯತೀಂದ್ರ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಲಸಿಕಾ ಕೇಂದ್ರವನ್ನು ತೆರೆಯಲಾಗಿತ್ತು. ಈ ವೇಳೆ ಸಂಜೆ ಐದು ಗಂಟೆಯವರೆಗೆ ಕಾಲೇಜು ಕ್ಲೋಸ್ ಮಾಡದಂತೆ ಆಯುಕ್ತರು ಕಾಲೇಜು ಮಾಲೀಕ ಯತೀಶ್ ಎಂಬುವವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಮನವಿಗೆ ಸ್ಪಂದಿಸದ ಕಾಲೇಜು ಮಾಲೀಕ ತನ್ನ ಸಹೋದರರ ಜೊತೆಗೂಡಿ ನಮ್ಮದು ಖಾಸಗಿ ಕಾಲೇಜು, ನೀನು ಯಾರು ಕೇಳಲು ಎಂದು ತಳ್ಳಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
Laxmi News 24×7