Breaking News
Home / ರಾಜಕೀಯ / ಲಸಿಕೆ​ ಸೆಂಟರ್​ ಕ್ಲೋಸ್​ ಮಾಡ್ಬೇಡಿ ಅಂದಿದ್ಕೆ ನಗರಸಭೆ ಆಯುಕ್ತರ ಮೇಲೆ ಹಲ್ಲೆ ಆರೋಪ

ಲಸಿಕೆ​ ಸೆಂಟರ್​ ಕ್ಲೋಸ್​ ಮಾಡ್ಬೇಡಿ ಅಂದಿದ್ಕೆ ನಗರಸಭೆ ಆಯುಕ್ತರ ಮೇಲೆ ಹಲ್ಲೆ ಆರೋಪ

Spread the love

ಹಾಸನ: ಕೋವಿಡ್​ ಲಸಿಕೆ ವಿತರಣೆ ಕೇಂದ್ರವನ್ನ ಕ್ಲೋಸ್​ ಮಾಡದಂತೆ ಹೇಳಿದ ನಗರಸಭೆ ಆಯುಕ್ತರ ಮೇಲೆ ಕಾಲೇಜು ಮಾಲೀಕರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಇಂದು ದೇಶಾದ್ಯಂತ ಬೃಹತ್​ ಲಸಿಕಾ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅದರ ನಿಮಿತ್ತ ಹೇಮಾವತಿನಗರದಲ್ಲಿನ ಯತೀಂದ್ರ ಪ್ಯಾರಾಮೆಡಿಕಲ್‌ ಸೈನ್ಸ್ ಕಾಲೇಜಿನಲ್ಲಿ ಲಸಿಕಾ ಕೇಂದ್ರವನ್ನು ತೆರೆಯಲಾಗಿತ್ತು. ಈ ವೇಳೆ ಸಂಜೆ ಐದು ಗಂಟೆಯವರೆಗೆ ಕಾಲೇಜು ಕ್ಲೋಸ್ ಮಾಡದಂತೆ ಆಯುಕ್ತರು ಕಾಲೇಜು ಮಾಲೀಕ ಯತೀಶ್ ಎಂಬುವವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಮನವಿಗೆ ಸ್ಪಂದಿಸದ ಕಾಲೇಜು ಮಾಲೀಕ ತನ್ನ ಸಹೋದರರ ಜೊತೆಗೂಡಿ ನಮ್ಮದು ಖಾಸಗಿ ಕಾಲೇಜು, ನೀನು ಯಾರು ಕೇಳಲು ಎಂದು ತಳ್ಳಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ