ರಾಜು ಮತ್ತು ದೇವಮಣಿ ದಂಪತಿ ಒಂದು ಚೆಂದನೆಯ ಮನೆಯಲ್ಲಿ ಇದ್ದರು. ಆದರೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಹಾಗೇ, ಆಸ್ತಿಯನ್ನೂ ಕೊಟ್ಟಿರಲಿಲ್ಲ.
ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಡೆತ್ ನೋಟ್ (Death Note) ಬರೆದಿಟ್ಟ ಮಗ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದಿದೆ. 32 ವರ್ಷದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡವರು. ‘ನನ್ನ ಸಾವಿಗೆ ಅಪ್ಪ ರಾಜು..ಅಮ್ಮ ದೇವಮಣಿಯೇ ಕಾರಣ’ ಎಂದು ಸ್ಪಷ್ಟವಾಗಿ ಡೆತ್ ನೋಟ್ ಬರೆದಿದ್ದಾರೆ. ಹಾಗೇ, ತಮಗೆ ತಂದೆ-ತಾಯಿ ಹೇಗೆ ಕಿರುಕುಳ ನೀಡಿದ್ದರು ಎಂಬುದನ್ನೂ ಡೆತ್ ನೋಟ್ನಲ್ಲಿ ವಿವರಿಸಿದ್ದಾರೆ.
ಗಿರೀಶ್ ತಂದೆ ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕರಾಗಿದ್ದಾರೆ. ಹಾಗೇ ತಾಯಿ ದೇವಮಣಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ. ಗಿರೀಶ್ಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ರಾಜು ಮತ್ತು ದೇವಮಣಿ ಇಬ್ಬರೂ ಮಗನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಪದೇಪದೆ ಮಗ-ಸೊಸೆಯನ್ನು ಹಂಗಿಸುತ್ತಿದ್ದರು ಎಂದು ಹೇಳಲಾಗಿದೆ. ಇದೆಲ್ಲ ಗಿರೀಶ್ ಬರೆದಿಟ್ಟಿರುವ ಡೆತ್ನೋಟ್ನಲ್ಲೇ ಉಲ್ಲೇಖವಾಗಿದೆ.
ರಾಜು ಮತ್ತು ದೇವಮಣಿ ದಂಪತಿ ಒಂದು ಚೆಂದನೆಯ ಮನೆಯಲ್ಲಿ ಇದ್ದರು. ಆದರೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಹಾಗೇ, ಆಸ್ತಿಯನ್ನೂ ಕೊಟ್ಟಿರಲಿಲ್ಲ. ಗಿರೀಶ್ ಬಳಿ ಜೀವನೋಪಾಯಕ್ಕೆ ಇದ್ದಿದ್ದ ಒಂದು ಟ್ರ್ಯಾಕ್ಟರ್ನ್ನೂ ಕೂಡ ಕಸಿದುಕೊಂಡಿದ್ದರು. ಜಮೀನು, ಮನೆ, ಆಸ್ತಿ ಏನೂ ಇಲ್ಲದೆ ಗಿರೀಶ್ ತೀರ ಕಷ್ಟಪಡುತ್ತಿದ್ದರು. ಇದೆಲ್ಲದರಿಂದ ಮನನೊಂದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು-ಪತ್ನಿಯೊಂದಿಗೆ ವಾಸವಾಗಿದ್ದ ಕೊಟ್ಟಿಗೆ ಗೋಡೆ ಮೇಲೆಲ್ಲ, ‘ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ, ಹೆತ್ತವರ ಕಿರುಕುಳವೇ ಕಾರಣ’ ಎಂದು ಬರೆದಿಟ್ಟಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಗಿರೀಶ್ ಹೆತ್ತವರಾದ ರಾಜು ಮತ್ತು ದೇವಮಣಿ ತಲೆಮರೆಸಿಕೊಂಡಿದ್ದಾರೆ.