ಗಣೇಶ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ!
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಕಳೆದ 60 ವರ್ಷಗಳಿಂದ ಪ್ರತಿ ವರ್ಷ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ. ಅಲ್ಲಾಭಕ್ಷ ಜಮಾದಾರ್ ಎಂಬುವವರು ಮೂರ್ತಿ ತಯಾರಿಸುತ್ತಿದ್ದು, ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಹೆಡ್ ಮಾಸ್ಟರ್ ಆಗಿಯೂ ಕೂಡ ಕಾರ್ಯನಿರ್ವಹಿಸ್ತಾ ಇದ್ದಾರೆ. ಪ್ರತಿವರ್ಷ ಗಣೇಶ ಚತುರ್ಥಿ ಬಂದಾಗ ತಮ್ಮ ಸಹೋದರ ಮೊಹಮ್ಮದ್ ಜೊತೆಗೂಡಿ ಗಣಪತಿ ವಿಗ್ರಹ ತಯಾರು ಮಾಡ್ತಾರೆ. ಇದು ಪೂರ್ವಜನರು ಕಲಿಸಿದ ವಿದ್ಯೆ, ಜನ ನಿಮ್ಮ ಜಾತಿ-ಧರ್ಮ ಬೇರೆ ಅಂತ ಹೇಳಿದ್ರೂ ನಾವು ಗಣಪನ ಮೂರ್ತಿ ತಯಾರಿಸ್ತೇವೆ ಅಂತ ಜಮಾದಾರ್ ತಿಳಿಸಿದ್ದಾರೆ.