ಬೆಳಗಾವಿ: ಸಚಿವ ಸ್ಥಾನದ ಬಹು ನೀರಿಕ್ಷೆಯಲ್ಲಿದ್ದ ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಯಾಗದೆ ಹೊಗಿರುವುದು ಚರ್ಚೆಗೆ ಕಾರಣವಾಗಿದೆ.
ಸರ್ಕಾರ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಿದೆ. ಇದರ ನಡುವೆಯೂ ಸಹ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪುತ್ರಿಯ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಈ ಸಮಾರಂಭಕ್ಕೆ ಆಗಮಿಸಿದ ಉಮೇಶ ಕತ್ತಿ ಅವರು, ಸಿಎಂ ಅವರು ಬರುವುದಕ್ಕೂ ಮೊದಲೇ ಕಾಲ್ಕಿತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಸರ್ಕಾರದಲ್ಲಿಯೇ ನಾನು ಮಂತ್ರಿಯಾಗುತ್ತೆನೆ. ಸಿಎಂ ಮೇಲೆ ನನಗೆ ಯಾವುದೇ ಕೋಪವಿಲ್ಲ. ಅವರು ನಮ್ಮ ನಾಯಕರು. ಇನ್ನೂ ಹಲವು ವರ್ಷಗಳ ರಾಜಕೀಯ ಜೀವನ ಇದೆ ಎಂದು ಇದೇ ವೇಳೆ ಉಮೇಶ ಕತ್ತಿ ಅವರು ಮಾಧ್ಯಮಕ್ಕೆ ಪತ್ರಿಕ್ರಿ ಸಿದ್ದಾರೆ