ಮೈಸೂರು: ಮಸೀದಿ ಮುಂದೆ ಹೋಗಿ ಪಟಾಕಿ ಸಿಡಿಸಿದ್ರೆ ಏನ್ ಆಗುತ್ತೆ, ಮಸೀದಿ ಮುಂದೆಯೇ ಗಣೇಶ ಮೆರವಣಿಗೆ ಹೋಗಬೇಕು ಎನ್ನುವ ಆಗಿಲ್ಲ. ಎಂದು ಗಣೇಶ ಹಬ್ಬ ಮಾಡುವ ಯುವಕರಿಗೆ ಮೈಸೂರು ಜಿಲ್ಲೆಯ ಟಿ ನರಸೀಪುರ ಇನ್ಸ್ಪೆಕ್ಟರ್ ಧನಂಜಯ ವಾರ್ನಿಂಗ್ ಕೊಟ್ಟಿದ್ದಾರೆ
ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವಿಚಾರದಲ್ಲಿ ಯುವಕರ ಗುಂಪಿಗೆ ಈ ವಾರ್ನಿಂಗ್ ನೀಡಿದ್ದಾರೆ. ನಾವು ಹಾಕಿಕೊಡುವ ಮಾರ್ಗದಲ್ಲೇ ಹೋಗಬೇಕು. ಮಸೀದಿ ಮುಂದೆ ಮೆರವಣಿಗೆ ಹೋಗುವಂತಿಲ್ಲ. ಅಕಸ್ಮಾತ್ ಹೋದರ ಹೇಳಲ್ಲ ಮಾಡಿ ತೋರಿಸ್ತೀನಿ ಎಂದು ಹೆದರಿಸಿದ್ದಾರೆ.
ಈ ಬಾರಿ ಮಸೀದಿ ಮುಂದೆ ಪಟಾಕಿ ಹೊಡೆದ್ರೆ ಗ್ರಹಚಾರ ಬಿಡಿಸ್ತೇನೆ. ಅಲ್ಲಿ ನಾವು ಭದ್ರತೆ ಹಾಕಿರ್ತಿವಿ. ನೀವು ಮೆರವಣಿಗೆ ಮಾಡುವ ರೂಟ್ ಕೊಟ್ಟು ಗಣಪತಿ ಕೂರಿಸಬೇಕು ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.
Laxmi News 24×7