Breaking News

ಜಿಲ್ಲೆ

ಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹ*ಲ್ಲೆ

ಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ! ಮೂವರು ಕುರಿಗಾರರ ಮೇಲೆ ಹ*ಲ್ಲೆ ಏಳು ಜನ ದುಷ್ಕರ್ಮಿಗಳಿಂದ ಹಲ್ಲೆಗೈದು ಪರಾರಿ* ಜಮೀನಿನಲ್ಲಿ ಬೀಡುಬಿಟ್ಟಿದ್ದ ಕುರಿ ಕಳ್ಳತನಕ್ಕೆ ಬಂದಿದ್ದ ಖದೀಮರ ಗ್ಯಾಂಗ್ ಪಾರ್ಟಿ ಮಾಡಲು ಕುರಿ ಕೊಡಿ ಎಂದು ಕುರಿಗಾಯಿಗಳಿಗೆ ಧಮ್ಕಿ ಹಾಕಿರೋ ಖದೀಮರು ಕುರಿ ಕೊಡದೇ ಇದ್ದಾಗ ಏಕಾಏಕಿ ಹಲ್ಲೆಗೈದು ಪರಾರಿ ಬೆಳಗಾವಿ ಹೊರವಲಯದ ಮಜ್ಜಗಾವಿಯಲ್ಲಿ ಸಂಜೆ ನಡೆದ ಘಟನೆ ಗಾಯಾಳು ಕುರಿಗಾರರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ …

Read More »

ಸಾರ್ವಜನಿಕರು ಮದ್ಯವರ್ತಿಗಳಿಗೆ ಬಲಿಯಾಗಬೇಡಿ: ತಹಸಿಲ್ದಾರ ಮಂಜುಳಾ ನಾಯಿಕ

ಹುಕ್ಕೇರಿ : ಸಾರ್ವಜನಿಕರು ಮದ್ಯವರ್ತಿಗಳಿಗೆ ಬಲಿಯಾಗಬೇಡಿ – ತಹಸಿಲ್ದಾರ ಮಂಜುಳಾ ನಾಯಿಕ ಸಾರ್ವಜನಿಕರು ಸರ್ಕಾರಿ ಕೇಲಸದಲ್ಲಿ ಮದ್ಯವರ್ತಿಗಳಿಂದ ದೂರ ಇರಬೇಕು ಎಂದು ಹುಕ್ಕೇರಿ ತಹಸಿಲ್ದಾರ ಶ್ರೀಮತಿ ಮಂಜುಳಾ ನಾಯಿಕ ಹೇಳಿದರು. ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಇತ್ತೀಚಿಗೆ ಕೇಲ ಮದ್ಯವರ್ತಿಗಳು ಆಕ್ರಮ ಸಾಗುವಳಿ ಜಮಿನು ಸಕ್ರಮ ಮಾಡುವದಾಗಿ ಹಣದ ಬೇಡಿಕೆ ಹಾಗೂ ಇನ್ನಿತರ ಆಮಿಷಿ ನೀಡಿ ಜನರಿಗೆ ಮೋಸ ಮಾಡುವದು ಕಂಡು ಬಂದಿದೆ . ಸಾರ್ವಜನಿಕರಿಂದ ಈಗಾಗಲೇ ಆಕ್ರಮ ಆಸ್ತಿಗಳ …

Read More »

ಮೇ ಮೊದಲ ವಾರದಲ್ಲಿ SSLC ಪರೀಕ್ಷೆ ಫಲಿತಾಂಶ ಪ್ರಕಟ,

ಬೆಂಗಳೂರು, ಏಪ್ರಿಲ್​ 16: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಎಸ್ಎಸ್​​ಎಲ್​ಸಿ ಪರೀಕ್ಷೆ-1 (SSLC Exam-1) ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗರಾಪ್ಪ ಹೇಳಿದ್ದಾರೆ. ಈಗಾಗಲೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭವಾಗಿದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ- 1 ನಡೆದಿದ್ದು 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 …

Read More »

ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಭಾರತ ಸುಭದ್ರ: ಹೆಚ್​ ಕೆ ಪಾಟೀಲ್

ಗದಗ : ಸರ್ವ ಜನಾಂಗವನ್ನು ಸಮದೃಷ್ಟಿಯಿಂದ ನೋಡುವ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿಕೊಟ್ಟರು. ಜೊತೆಗೆ ನಮ್ಮ ಕರ್ತವ್ಯ ನಮಗೆ ಸೂಚಿಸಿದರು. ಅವರ ಆದರ್ಶಗಳ ಪಾಲನೆ ಅತ್ಯವಶ್ಯ. ಅದೇ ರೀತಿ ಬಾಬು ಜಗಜೀವನರಾಮ್​​ ಅವರು ಹೊಂದಿದ ಸಂಸ್ಕೃತ ಪಾಂಡಿತ್ಯ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ ಕೆ ಪಾಟೀಲ್​ ಹೇಳಿದರು. ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಗದಗ ಜಿಲ್ಲೆಯ ವಿವಿಧ …

Read More »

ಕುಡಚಿ ಠಾಣೆಯ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು

ಕುಡಚಿ ಠಾಣೆಯ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು ಕುಡಚಿ: ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕುಡಚಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯಲ್ಲಪ್ಪ ಭೋಜ ಅವರಿಗೆ ರವಿವಾರ ರಾತ್ರಿ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಕಾಣಿಸಿಕೊಂಡಾಗ ಅವರು ತಮ್ಮ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ, ನಂತರ ಅವರನ್ನು ತಕ್ಷಣವೇ ಮಹಾರಾಷ್ಟ್ರದ ಸಾಂಗಲಿ ನಗರದ ಭಾರತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು …

Read More »

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ ಮೊಮ್ಮಕ್ಕಳ ಮೇಲಿನ ಹ* ಲ್ಲೆ ಪ್ರಶ್ನಿಸಿದಕ್ಕೆ ಅಜ್ಜಿ, ಮಗ ಹಾಗೂ ಮಗಳ ಮೇಲೆ ಮಾರಣಾಂತಿಕ ಹ*ಲ್ಲೆ‌ ಆರೋಪ ಕೊಡಲಿ ಹಾಗೂ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಆರೋಪ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ಘಟನೆಯಲ್ಲಿ ಉಮರಾಣಿ ಗ್ರಾಮದ ಭೀಮಾ ಜಿಡ್ಡಿಮನಿ( 20), ಶೋಭಾ ಶಂಕರ್ ಜಿಡ್ಡಿಮನಿ( 40), ವಿಠ್ಠಲ ಶಂಕರ ಜಿಡ್ಡಿಮನಿಗೆ ಗಂಭೀರ ಗಾಯ ಗಂಭೀರ …

Read More »

ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು

ಬೈಲಹೊಂಗಲ : ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು ನಾಯಿ ಕಡಿದು ಆರು ತಿಂಗಳ ಬಳಿಕ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ತಿಗಡಿ ಗ್ರಾಮದಲ್ಲಿ ನಡೆದಿದೆ ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ ಎಂಬ ವ್ಯಕ್ತಿ ಮನೆಯಲ್ಲಿ ಸಾಕಿದ್ದ ನಾಯಿಗೆ ಹುಚ್ಚುನಾಯಿಯೊಂದು ಕಚ್ಚಿತ್ತು . ನಂತರ ಆ ಸಾಕು ನಾಯಿಯು ಶಿವಶಂಕರ ಅವರನ್ನು ಕಚ್ಚಿತ್ತು ಚಿಕಿತ್ಸೆ ಪಡೆದುಕೊಳ್ಳದೆ ಅವರು ನಿರ್ಲಕ್ಷ ತೋರಿದ್ದರು. ಆರು ತಿಂಗಳ ನಂತರ …

Read More »

ದೇವರಾಜ ಅರಸು ಕಾಲನಿಯಲ್ಲಿ ನಮೋಕಾರ ಮಂತ್ರ ದಿನಾಚರಣೆ

ಬೆಳಗಾವಿ : ದೇವರಾಜ ಅರಸು ಕಾಲನಿಯಲ್ಲಿ ನಮೋಕಾರ ಮಂತ್ರ ದಿನಾಚರಣೆ ಬೆಳಗಾವಿ ಬಸವನ ಕುಡಚಿಯಲ್ಲಿರುವ ದೇವರಾಜ ಅರಸು ಕಾಲನಿಯ ಗಾಜಿನ ಮನೆಯಲ್ಲಿ ನಮೋಕಾರ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು ಬುಧವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಭಗವಾನ್ ಮಹಾವೀರ 1008 ತೀರ್ಥಂಕರರ ಫೋಟೋಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ಆ ನಂತರ” ಜೈ ಜಿನೇಂದ್ರ ನಮೋ ಅರಿಹಂತಾನಂ ನಮೋ ಸಿದ್ಧಾನಂ ನಮೋಕರ್”ಎಂಬ ಮಹಾಮಂತ್ರವನ್ನು ನೆರೆದಿದ್ದವರೆಲ್ಲರೂ ಪಠಿಸಿದರು. ಜೈನ ಸಮಾಜದ …

Read More »

ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಬೆಳಗಾವಿ : ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಳಗಾವಿ ಜಿಲ್ಲಾಧಿಕಾರ ಮೊಹಮ್ಮದ್ ರೋಷನ್ ಅವರಿಗೆ ಶುಕ್ರವಾರ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೌರವಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಬೆಳಗಾವಿ ಜಿಲ್ಲೆ ತುಂಬಾ ದೊಡ್ಡ ಜಿಲ್ಲೆ. ಇಲ್ಲಿ ಎಲ್ಲಾ ಸಂಪ್ರದಾಯದ ಮಠ, ಮಾನ್ಯಗಳು ಒಳ್ಳೆಯ ಕಾರ್ಯ ಮಾಡುತ್ತಿದೆ. ಅದರಲ್ಲಿಯೂ …

Read More »

ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಅವಜಿ ಯವರ ಅಮಾನತ್ತಿಗೆ ಆಗ್ರಹ

ಹುಕ್ಕೇರಿ : ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಅವಜಿ ಯವರ ಅಮಾನತ್ತಿಗೆ ಆಗ್ರಹ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವಜಿ ಯವರನ್ನು ಅಮಾನತ್ತ ಮಾಡಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನ೩ಗಳು ಮತ್ತು ಅಂಬೇಡ್ಕರ್ ಜನ ಜಾಗ್ರತೆ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಜರುಗಿಸಿ ಪೋಲಿಸ್ ಠಾಣೆ ಎದುರು ಧರಣಿ ಕುಳಿತರು. ಮಾದ್ಯಮಗಳೊಂದಿಗೆ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ ರಾಶಿಂಗೆ ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವುಜಿ ದಲಿತ ವಿರೋಧಿಯಾಗಿದ್ದು, …

Read More »