ಕರ್ನಾಟಕ ರಾಜಕಾರಣದ ಬಲಿಷ್ಠ ನಾಯಕರಲ್ಲಿ ಒಬ್ಬರಾದ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಡಿ.ಕೆ. ಶಿವಕುಮಾರ್ ಅವರು ಈಗ ‘ತಾತ’ನಾಗಿ ಬಡ್ತಿ ಪಡೆದಿದ್ದಾರೆ!
ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಗುರುಗಳಾದ ದಿವಂಗತ ಎಸ್.ಎಂ. ಕೃಷ್ಣ ಅವರ ಜನ್ಮದಿನದಂದೇ ಅವರ ಮೊಮ್ಮಗ ಅಮರ್ತ್ಯ ಹೆಗಡೆ ಮತ್ತು ಐಶ್ವರ್ಯ ದಂಪತಿಗೆ ಮಗು ಜನಿಸಿರುವುದು ವಿಶೇಷ.
ರಾಜಕೀಯದ ಜಂಜಾಟಗಳ ನಡುವೆ ಮಗಳ ಮನೆಗೆ ಬಂದಿರುವ ಪುಟ್ಟ ದೇವತೆಯನ್ನು ಕಂಡು ಡಿ.ಕೆ. ಶಿವಕುಮಾರ್ ಕುಟುಂಬ ಖುಷಿಯ ಕಡಲಲ್ಲಿ ತೇಲುತ್ತಿದೆ.
ತಾತನಾದ ಸಂಭ್ರಮದಲ್ಲಿರುವ ಡಿ.ಕೆ. ಶಿವಕುಮಾರ್ ಮತ್ತು ಹೊಸ ಪೋಷಕರಾದ ಅಮರ್ತ್ಯ-ಐಶ್ವರ್ಯ ದಂಪತಿಗೆ ಹಾರ್ದಿಕ ಶುಭಾಶಯಗಳು
Laxmi News 24×7