ಬೆಂಗಳೂರು: ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದಿಂದ ಸಿಲಿಕಾನ್ ಸಿಟಿಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತೆ. ಜೋರು ಮಳೆ ಬಂದ್ರೆ ಸಿಲಿಕಾನ್ ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತೆ. ಏಕೆಂದರೆ ರಾಜಕಾಲುವೆಯ ಬಹುತೇಕ ಬಫರ್ ಝೋನ್ ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಹಾಗೂ ಒತ್ತುವರಿ ಮಾಡಿರುವ ಜಾಗ ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ.
ಒತ್ತುವರಿಯಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದ ಪರಿಸ್ಥಿತಿ ಇದೆ. ಇದರಿಂದಾಗಿ ತಡೆಗೋಡೆ ಒಡೆದು ನುಗ್ಗುವ ನೀರಿನಿಂದ ಪ್ರವಾಹ ಉಂಟಾಗುತ್ತಿದೆ. ಓವರ್ ಫ್ಲೋನಿಂದಾಗಿ ರಸ್ತೆ, ಮನೆ, ಅಂಗಡಿಗಳು ಮುಳುಗುತ್ತವೆ. ಒತ್ತುವರಿ ಗೊತ್ತಿದ್ರೂ ಬಿಬಿಎಂಪಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇನ್ನು ಒತ್ತುವರಿ ಮಾಡಿದವರಿಗೆ ತೆರೆಮರೆಯಲ್ಲಿ ರಾಜಕಾರಣಿಗಳು ಬೆಂಬಲ ನೀಡ್ತಾ ಇದ್ದಾರೆ.