Breaking News
Home / ಕ್ರೀಡೆ / ಬಾಳಿಗೆ ಬೆಳಕಾದ IPL​ ಬಿಡ್ಡಿಂಗ್; ಟೆಂಪೋ ಚಾಲಕನ ಮಗನೀಗ ಕರೋಡ್​ಪತಿ

ಬಾಳಿಗೆ ಬೆಳಕಾದ IPL​ ಬಿಡ್ಡಿಂಗ್; ಟೆಂಪೋ ಚಾಲಕನ ಮಗನೀಗ ಕರೋಡ್​ಪತಿ

Spread the love

ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೆ ಏರಿ, ನಿಬ್ಬೆರಗಾಗುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್​‌ ಲೋಕದಲ್ಲಿ ಇಂತಹ ಹಲವು ಸ್ಫೂರ್ತಿದಾಯಕ ಕಥೆಗಳು ಸಿಗುತ್ತವೆ.

ಹಿಂದೆ ಮುಂಬೈನ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡಿ ಕ್ರಿಕೆಟ್​ ಕಿಟ್‌ಗೆ ಹಣ ಹೊಂದಿಸಿಕೊಳ್ಳುತ್ತಿದ್ದ ಯಶಸ್ವಿ ಜೈಸ್ವಾಲ್​.. ಶಾಲಾ ವಾಹನ ಚಾಲನೆ, ಹಾಲು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ನರೇಶ್​​ ಗರ್ಗ್​ ಪುತ್ರ ಪ್ರಿಯಂ ಗರ್ಗ್​‌ 13ನೇ ಸೀಸನ್​​ ಐಪಿಎಲ್​ ಹರಾಜಿನಲ್ಲಿ ಕೋಟ್ಯಾಧಿಪತಿಗಳಾದ ಕಥೆ ನಮಗೆ ಗೊತ್ತೇ ಇದೆ. ಇದೇ ರೀತಿ ಈಗ 14ನೇ ಆವೃತ್ತಿಯ ಮಿನಿ ಹರಾಜಿನಲ್ಲೂ, ಟೆಂಪೋ ಚಾಲಕನ ಮಗ ಕರೋಡ್​ಪತಿಯಾಗಿದ್ದಾನೆ. ಆತನೇ ಸೌರಾಷ್ಟ್ರದ ಯುವ ವೇಗಿ ಚೇತನ್​​ ಸಕಾರಿಯಾ.

ಬಡ ಕುಟುಂಬದಲ್ಲಿ ಹುಟ್ಟಿದ್ದ ಚೇತನ್​ ಸಕಾರಿಯಾ ಟೆಂಪೋ ಚಾಲಕನ ಮಗ. ಟೆಂಪೋ ಚಾಲಕರಾಗಿದ್ದ ಸಕಾರಿಯಾ ತಂದೆಗೆ ಕುಟುಂಬ ನಿರ್ವಹಣೆಯೇ ಅತೀ ದೊಡ್ಡ ಸವಾಲಾಗಿತ್ತು. ಹೀಗಾಗಿ ಕುಟುಂಬದ ನಿರ್ವಹಣೆಗಾಗಿ ಸಕಾರಿಯಾ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕ್ರಿಕೆಟನ್ನೇ​​ ಬಿಡಬೇಕಾದ ಪರಿಸ್ಥಿತಿಯೂ ಎದುರಾಗಿತ್ತು. ಆದರೆ ಸಂಕಷ್ಟದ ಸಂದರ್ಭದಲ್ಲೂ ಛಲ ಬಿಡದ ಈ ಯುವ ವೇಗಿಯ ಕಠಿಣ ಪರಿಶ್ರಮಕ್ಕೆ ಈಗ ಐಪಿಎಲ್​​ ಬಿಡ್ಡಿಂಗ್​ನಲ್ಲಿ ಪ್ರತಿಫಲ ಸಿಕ್ಕಿದೆ.

ರಾಜಸ್ಥಾನ್ ರಾಯಲ್ಸ್​ಗೆ ಅಚ್ಚರಿಯ ಮೊತ್ತಕ್ಕೆ ಸೇಲ್​​
ಐಪಿಎಲ್​​​ ಸೀಸನ್​​​-14ರ ಮಿನಿ ಹರಾಜಿನಲ್ಲಿ ದೇಶಿ ಪ್ರತಿಭೆಗಳಾದ ಕೃಷ್ಣಪ್ಪ ಗೌತಮ್​​ ಹಾಗೂ ಶಾರುಖ್​ ಖಾನ್​​ ಅಚ್ಚರಿಯ ಮೊತ್ತಕ್ಕೆ ಸೇಲ್​​ ಆಗಿದ್ದು ಗೊತ್ತಿದೆ. ಹೀಗೆ ಸ್ಟಾರ್​​​ ಪಟ್ಟ ಹೊಂದಿರದ ಸೌರಾಷ್ಟ್ರದ ಯುವ ಎಡಗೈ ವೇಗಿ ಚೇತನ್​ ಸಹ ಅಚ್ಚರಿಯ ಮೊತ್ತಕ್ಕೆ ಸೇಲ್​ ಆಗಿದ್ದಾರೆ. ಬಿಡ್ಡಿಂಗ್​​ನಲ್ಲಿ 20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಸಕಾರಿಯಾ, ರಾಜಸ್ಥಾನ್​​ ರಾಯಲ್ಸ್​ಗೆ 1.20 ಕೋಟಿ ರೂಪಾಯಿಗೆ ಖರೀದಿಯಾಗಿದ್ದಾರೆ. ಆ ಮೂಲಕ ಕತ್ತಲಲ್ಲಿ ದಿನ ಕಳೆಯುತ್ತಿದ್ದ ಕುಟುಂಬದಲ್ಲೀಗ ಐಪಿಎಲ್​ ಬೆಳಕಾಗಿ ಬಂದಿದೆ.

ಹರಾಜಿಗೂ ಮುನ್ನ ಎದುರಾಗಿತ್ತು ದೊಡ್ಡ ಶಾಕ್​
ಜನವರಿಯಲ್ಲಿ ಸೈಯದ್​​ ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಭಾಗಿಯಾಗಿದ್ದ ಚೇತನ್​ ಅದ್ಬುತ ಪ್ರದರ್ಶನ ನೀಡಿದ್ದರು. ಆದರೆ ಟೂರ್ನಿ ಮುಗಿದ ಬಳಿಕ ಮನೆಗೆ ಆಗಮಿಸಿದ್ದ ಸಕಾರಿಯಾಗೆ ಅಘಾತ ಕಾದಿತ್ತು. ಇತ್ತ ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಚೇತನ್​  ಬ್ಯುಸಿಯಾಗಿದ್ರೆ, ಅತ್ತ ಸಹೋದರ ರಾಹುಲ್​ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಆದ್ರೆ ಚೇತನ್​ ಸಕಾರಿಯಾ ಮನೆಗೆ ವಾಪಸ್​​ ಬರುವವರಿಗೂ ಈ ವಿಚಾರ ತಿಳಿದೇ ಇರಲಿಲ್ಲ. ಇದರಿಂದ ಮನನೊಂದಿದ್ದ ಸಕಾರಿಯಾಗೀಗ ಮಿನಿ ಹರಾಜು ಸಂತಸ ಮೂಡುವಂತೆ ಮಾಡಿದೆ.

ಕಳೆದ ವರ್ಷ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನೆಟ್​​ ಬೌಲರ್​ ಆಗಿದ್ದ ಸಕಾರಿಯಾ, ಆರ್​ಸಿಬಿ ಕೋಚ್​ ಮೈಕ್​ ಹೆಸನ್​, ಸೈಮನ್​ ಕ್ಯಾಟಿಚ್​, ವೇಗಿ ಡೇಲ್​ ಸ್ಟೇನ್​ರಿಂದ ಬೌಲಿಂಗ್​ ಟಿಪ್ಸ್​ ಪಡೆದಿದ್ದರು. ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಎಬಿಡಿವಿಲಿಯರ್ಸ್​ರಂತಹ​ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡುವ ಅವಕಾಶ ಆತ್ಮವಿಶ್ವಾಸ ಮೂಡಿಸಿತ್ತು. ಇದು​ ಸೈಯದ್​​ ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾರಣವಾಗಿತ್ತು. ಆ ಮೂಲಕ ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದ ಸಕಾರಿಯಾ, 1.25 ಕೋಟಿ ರೂಪಾಯಿಗೆ ರಾಜಸ್ಥಾನ್​ ರಾಯಲ್ಸ್​ಗೆ ಸೇಲ್​ ಆಗಿದ್ದಾರೆ. ಇದರೊಂದಿಗೆ ಬಡತನದಲ್ಲಿ ಬೆಂದಿದ್ದ ಪ್ರತಿಭೆಯ ಬಾಳಲ್ಲಿ ಮಂದಹಾಸ ಮೂಡುವಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಅನ್ನೋದೆ ಕ್ರಿಕೆಟ್​​ ಅಭಿಮಾನಿಗಳ ಆಶಯ.


Spread the love

About Laxminews 24x7

Check Also

ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Spread the love ಧಾರವಾಡ : ಇದೇ ಮೊದಲ ಬಾರಿಗೆ ಕಾವಿ ಧರಿಸಿ ಧಾರವಾಡ ಲೋಕಸಭಾ ಚುನಾವಣಾ ಕಣಕ್ಕಿಳಿದು ರಂಗೇರುವಂತೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ