Breaking News

Laxminews 24x7

ಅಕ್ರಮವಾಗಿ ಮದ್ಯ ಮಾರಾಟ ದಾಳಿ ಮಾಡಿದ ಪೊಲೀಸರ ಏಟು ಬಿತ್ತು ಮಗನ ಮರ್ಮಾಂಗದ ಮೇಲೆ..

ಬಾಗಲಕೋಟೆ: ವ್ಯಕ್ತಿಯೊಬ್ಬ ಮನೆಯಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ಥಳಿಸಿದ್ದು, ತಪ್ಪಿಸಲು ಹೋದ ಮಗನ ಮರ್ಮಾಂಗಕ್ಕೂ ಏಟು ಬಿದ್ದ ಪ್ರಕರಣ ನಡೆದಿದೆ. ಮದ್ಯ ಮಾರುತ್ತಿದ್ದ ತಂದೆ ಹಾಗೂ ಆತನ ಪುತ್ರ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.   ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತ ಹೊಸಮನಿ ಹಾಗೂ ಆತನ ಪುತ್ರ ಸಂತೋಷ ಹೊಸಮನಿ ಆಸ್ಪತ್ರೆಗೆ ದಾಖಲಿಸಲ್ಪಟ್ಟವರು. ಹನುಮಂತ ಮನೆಯಲ್ಲಿ …

Read More »

ರಾಷ್ಟ್ರಪತಿಗಳಿಗೇ ದೃಷ್ಟಿ ತೆಗೆದು ಪದ್ಮಶ್ರೀ ಸ್ವೀಕರಿಸಿದ ಜೋಗತಿ ಮಂಜಮ್ಮ.

ನವದೆಹಲಿ: ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಜಮ್ಮ. ಬಿ. ಜೋಗತಿ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆ ಕಾರ್ಯಕ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ. ಆದರೆ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿ ಭವನದ ಸಭಾಂಗಣ ಒಂದು ಅಪರೂಪದದ ಕ್ಷಣಕ್ಕೆ ಸಾಕ್ಷಿಯಾಯ್ತು. ಹೌದು ಮಂಜಮ್ಮ ಜೋಗತಿ ಪ್ರಶಸ್ತಿ ಸ್ವೀಕಾರಕ್ಕೆ ವೇದಿಕೆಗೆ ಬಂದ ಬಳಿಕ ರಾಷ್ಟ್ರಪತಿಯವರಿಗೆ ಆಕಳಿಕೆ (ದೃಷ್ಟಿ)ತೆಗೆದಿದ್ದಾರೆ. ಈ ವೇಳೆ ಅಚ್ಚರಿಯಿಂದ ನೋಡಿದ ರಾಷ್ಟ್ರಪತಿಗಳು …

Read More »

ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸಂತ್ರಸ್ತರ ಕಡಿಮೆ ವಯಸ್ಸು ಮರಣದಂಡನೆ ವಿಧಿಸಲು ಮುಖ್ಯವಾಗುವುದಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರ ಕಡಿಮೆ ವಯಸ್ಸು ಮರಣದಂಡನೆ ವಿಧಿಸಲು ಈ ನ್ಯಾಯಾಲಯವು ಏಕೈಕ ಅಥವಾ ಮುಖ್ಯ ಅಂಶ ಎಂದು ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ 40 ವರ್ಷಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ಇದೇ ರೀತಿಯ 67 ಪ್ರಕರಣಗಳನ್ನು ಉಲ್ಲೇಖಿಸಿ ಕೋರ್ಟ್​ ಈ ರೀತಿ ಹೇಳಿದೆ. ಕರ್ನಾಟಕದ ಬೆಳಗಾವಿಯ ಖಾನಾಪುರದ ಈರಪ್ಪ ಸಿದ್ದಪ್ಪ ಎಂಬುವವರು ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದರು. ಕರ್ನಾಟಕ …

Read More »

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರನ್ನು ನಮ್ರತಾ ಎಂಬ ವಿದ್ಯಾರ್ಥಿನಿ ಜೀವನದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾಳೆ.

ಕೊಡಗು: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರನ್ನು ನಮ್ರತಾ ಎಂಬ ವಿದ್ಯಾರ್ಥಿನಿ ಜೀವನದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾಳೆ. ವ್ಯಕ್ತಿಯೊಬ್ಬರು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಗ್ರಾಮದ ಬಳಿ ಕೆರೆಗೆ ಹಾರಿದ್ದರು. ಆ ವೇಳೆ ವ್ಯಕ್ತಿ ಮುಳುಗುತ್ತಿರುವುದನ್ನು ನೋಡಿದ ವಿದ್ಯಾರ್ಥಿನಿ ನಮ್ರತಾ ಹಿಂದೆಮುಂದೆ ಯೋಚಿಸದೆ, ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾಳೆ. 10 ಅಡಿಗೂ ಅಧಿಕ ಆಳವಿದ್ದ ಕೆರೆ ಅದಾಗಿದೆ. ವಿದ್ಯಾರ್ಥಿನಿ ನಮ್ರತಾಳ …

Read More »

ಸತತ ಆರು ದಿನಗಳಿಂದ ಸ್ಥಿರತೆಯನ್ನು ಕಾಯ್ದುಕೊಂಡ ಪೆಟ್ರೋಲ್​, ಡೀಸೆಲ್​ ದರ!

Petrol Diesel Price Today | ದೆಹಲಿ: ಸತತ ಆರು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ ಇಂದು ಬುಧವಾರ (ನವೆಂಬರ್ 10) ಪೆಟ್ರೋಲ್ (Petrol Price), ಡೀಸೆಲ್ ಬೆಲೆ (Diesel Price) ಸ್ಥಿರತೆ ಕಾಯ್ದುಕೊಂಡಿದೆ. ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಇಂದು ಇಂಧನ ದರದಲ್ಲಿ (Fuel Price) ಯಾವುದೇ ಬದಲಾವಣೆಗಳಾಗಿಲ್ಲ. ಇಂದು ಲೀಟರ್ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ಬೆಲೆ ಎಷ್ಟಿದೆ? …

Read More »

ಭಾರತ ಟಿ20 ತಂಡದ ಹೊಸ ನಾಯಕನಾಗಿ ರೋಹಿತ್ ಶರ್ಮಾ

ನ್ಯೂಜಿಲೆಂಡ್ ವಿರುದ್ದ ನಡೆಯಲಿರುವ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು (Team India T2o Squad) ಪ್ರಕಟಿಸಲಾಗಿದೆ. ಭಾರತ ಟಿ20 ತಂಡದ ಹೊಸ ನಾಯಕನಾಗಿ ರೋಹಿತ್ ಶರ್ಮಾ (Rohit Sharma Captain) ಆಯ್ಕೆಯಾಗಿದ್ದಾರೆ. ಹಾಗೆಯೇ ಉಪನಾಯಕನ ಜವಾಬ್ದಾರಿ ಕೆಎಲ್ ರಾಹುಲ್ (KL Rahul) ಅವರಿಗೆ ವಹಿಸಲಾಗಿದೆ. 16 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಕೊಹ್ಲಿ, ಶಮಿ, ಬುಮ್ರಾ ಸೇರಿದಂತೆ ಕೆಲ ಹಿರಿಯ …

Read More »

ಸಿಎಂಗೆ ‘ಹೈಕಮಾಂಡ್’ ಟೆನ್ಷನ್? ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡು

ಬೆಂಗಳೂರು: ಬೈಎಲೆಕ್ಷನ್ ರಿಸಲ್ಟ್ ಹೊರಬಿದ್ದಿದ್ದೇ ಬಿದ್ದಿದ್ದು, ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸಂಭವಿಸ್ತಿದೆ. ಅದ್ರಲ್ಲೂ ಬಿಜೆಪಿ ನಾಯಕರು ಬೈಎಲೆಕ್ಷನ್ ಫಲಿತಾಂಶದಿಂದ ಚಿಂತೆಗೀಡಾಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜನರ ವಿಶ್ವಾಸ ಗೆಲ್ಲಲು ಬೃಹತ್ ಯಾತ್ರೆಗೂ ಪ್ಲ್ಯಾನ್ ಆಗಿದೆ. ಆದ್ರೆ ಈ ನಡುವೆ ಸಿಎಂ ಬೊಮ್ಮಾಯಿ ದಿಢೀರ್ ದೆಹಲಿಗೆ ತೆರಳ್ತಿದ್ದಾರೆ. ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡು ಸಿಎಂ ತವರು ಜಿಲ್ಲೆಯಲ್ಲೇ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಇದು ಸಿಎಂ ಸೇರಿದಂತೆ …

Read More »

ತೆಲುಗು ಚಿತ್ರರಂಗಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟ ದುನಿಯಾ ವಿಜಯ್!?

ಸಲಗ ಸಿನಿಮಾ ಯಶಸ್ಸಿನ ನಂತರ ದುನಿಯಾ ವಿಜಯ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲವು ಮೂಲಗಳಿಂದ ಕೇಳಿ ಬಂದ ಮಾಹಿತಿ ಪ್ರಕಾರ ತೆಲುಗು ಸ್ಟಾರ್ ನಟನ ಜೊತೆ ವಿಜಯ್ ನಟಿಸುತ್ತಿದ್ದಾರಂತೆ ಅದುವೇ ವಿಲನ್ ಪಾತ್ರದಲ್ಲಿ. ಸಲಗ ಸಿನಿಮಾ ಬಗ್ಗೆ ಮಾಹಿತಿ ಪಡೆದುಕೊಂಡ ನಂದಮುರಿ ಬಾಲಕೃಷ್ಣ ಅವರು ಈಗ ಸಲಗ ಜೊತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ.

Read More »

ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.  ಬಿಟ್‌ ಕಾಯಿನ್ ಹಗರಣ ಭಾವಿ ರಾಜಕಾರಣಿಗಳು ಇದ್ದಾರೆ ಎಂಬ ವದಂತಿ..?

ಬೆಂಗಳೂರು, (ನ.10): ಬಿಟ್‌ ಕಾಯಿನ್ ಹಗರಣ (Bitcoin Scam) ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.  ಬಿಟ್‌ ಕಾಯಿನ್ ಹಗರಣದಲ್ಲಿ ಹಲವು ಆಯಾಮಗಳು ಬಹಿರಂಗಗೊಳ್ಳುತ್ತಿದ್ದು ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ಹಗರಣದ ತನಿಖೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಸಿಟಿಜನ್ ರೈಟ್ಸ್ ಫೌಂಡೇಶನ್‌, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.  

Read More »

ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್‌ ಅಲ್ಲೊಂದು ಕ್ಯಾಮಾರ ಕಣ್ಣು ಎಲ್ಲವನ್ನೂ ಸೆರೆ ಹಿಡಿದಿದೆ.

ಮಂಗಳೂರು(ನ.09):  ಎಚ್ಚರ ತಪ್ಪಿದರೆ ಹೀರೋ ಆಗಲು ಹೋಗಿ ವಿಲನ್ ಆಗುವ ಸಾಧ್ಯತೆ ಈಗಿನ ಕಾಲದಲ್ಲಿ ಹೆಚ್ಚು. ಕಾರಣ ಎಲ್ಲಿ ಕ್ಯಾಮರ ಇರುತ್ತೆ, ಎಲ್ಲಿ ರೆಕಾರ್ಡ್ ಆಗುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಹೀಗೇ ಸುತ್ತ ಮುತ್ತ ನೋಡಿ, ಯಾರು ಇಲ್ಲ ಎಂದುಕೊಂಡ ಜೋಡಿ, ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್‌ಗೆ ಇಳಿದೆದೆ. ಆದರೆ ಅಲ್ಲೊಂದು ಕ್ಯಾಮಾರ ಕಣ್ಣು ಎಲ್ಲವನ್ನೂ ಸೆರೆ ಹಿಡಿದಿದೆ. ಇದು ಮಂಗಳೂರಿನ ಮಾಲ್ ಒಂದರಲ್ಲಿ ನಡೆದ ಘಟನೆ. ಮಾಲ್ ಬಾಲ್ಕನಿಯಲ್ಲಿ ನಿಂತ …

Read More »