Breaking News

ದೀಪಾವಳಿ ಲಕ್ಷ್ಮೀ ಪೂಜೆ ಮುಗಿಯುತ್ತಿದ್ದಂತೆ ಚಿನ್ನಾಭರಣ ಅಂಗಡಿಗಳ ಮೇಲೆ ಆದಾಯ ತೆರಿಗೆ ದಾಳಿ

Spread the love

ಬೆಳಗಾವಿ: ದೀಪಾವಳಿ ಲಕ್ಷ್ಮೀ ಪೂಜೆ ಮುಗಿಯುತ್ತಿದ್ದಂತೆ  ಬೆಳಗಾವಿ ಜಿಲ್ಲೆಯಲ್ಲಿ ಚಿನ್ನಾಭರಣ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು IT ದಾಳಿ ನಡೆಸಿದ್ದಾರೆ. ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಪ್ರತಿಷ್ಠಿತ ಪೋತದಾರ್​ ಜ್ಯುವೆಲ್ಲರ್ಸ್ ಅಂಗಡಿ ಮೇಲೆ ದಾಳಿ ನಡೆದಿದೆ. ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಬೆಳಗಾವಿಯ ಜಾಧವ್ ನಗರದಲ್ಲಿನ ಅನಿಲ್ ಮನೆಯಲ್ಲಿ ಶೋಧ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಕಾರ್ಯ ಮುಂದುವರಿದಿದೆ.

ಅನಿಲ್ ಪೋತದಾರ ಸಹೋದರರಾದ ಸಂಜೀವ್ ಮತ್ತು ರಾಜೀವ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಟೀಳಕವಾಡಿಯಲ್ಲಿರುವ ಎರಡು ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಜಾಧವ್ ನಗರದಲ್ಲಿರುವ ಇನ್ನೋರ್ವ ಸಹೋದರನ ಮಗ ನಿಶಿಲ್ ಪೋತದಾರ ಮನೆ ಮೇಲೆಯೂ ದಾಳಿ‌ ನಡೆದಿದೆ. ನಾಲ್ಕು ನಿವಾಸ ಮತ್ತು ಒಂದು ಜ್ಯುವಲೆರಿ ಶಾಪ್ ನಲ್ಲಿ ಐಟಿ ತಲಾಶ್​ ನಡೆದಿದೆ. ಚಿನ್ನಾಭರಣ ಖರೀದಿ ಮತ್ತು ಆಸ್ತಿ ಖರೀದಿ ಪತ್ರಗಳು ಸೇರಿದಂತೆ ಕೆಲ ಮಹತ್ವದ ದಾಖಲೆಗಳು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ರಾಜಣ್ಣ ರಾಜಕೀಯ ಮತ್ತು ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ:C.M.

Spread the love ರಾಜಣ್ಣ ರಾಜಕೀಯ ಮತ್ತು ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ: ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ