ಗೋಕಾಕ್: ದೇಶದಲ್ಲಿ ದಿನದಿನಕ್ಕೆ ಅಟ್ಟಹಾಸ ಮೇರೆಯುವ ಮಹಾಮಾರಿ ಕೋರೊನಾ ವೈರಸ್ ಹರಡುವಿಕೆಯಿಂದ ದೇಶವ್ಯಾಪ್ತಿ ಲಾಕ್ ಡೌನ್ ಆಗಿದ್ದು ಗೋಕಾಕ್ ನಗರ್ ಪ್ರದೇಶ ದಲ್ಲಿ ಸಿಂಧೂಳ್ಳಿ ಮಠ ದವಾಖಾನೆಯ ಹಿಂದುಗಡೆ ಅಲೆಮಾರಿ ಜನಾಂಗದವರು ಕೂಲಿ ಕಾರ್ಮಿಕರು ವ್ಯಾಪಾರವಿಲ್ಲದೆ ಮತ್ತು ಊಟವಿಲ್ಲದೆ ಪರದಾಡುತ್ತಿದ್ದರು.
ಅವರಿಗೆ ಶ್ರೀ ಬಸವಗೋಪಾಲ ನೀಲಮಾಣಿಕ ಬಂಡಿಗಣಿ ಮಠದ ದಾಸೋಹ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಅವರಿಂದ ಅನ್ನದಾಸೋಹ ಮಾಡಲಾಯಿತು ಬಾಗಲಕೋಟ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ನಂಬಿದ ಭಕ್ತರನ್ನು ಕಾಯುವ ವಿಶ್ವ ಚೇತನ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿ ಅವರು ಮೂಡಲಗಿ ತಾಲೂಕಿನ ಅರಭಾಂವಿಯ ಪಟ್ಟಣ ಪಂಚಾಯಿತಿಯ ಇಂದಿರಾ ನಗರದಲ್ಲಿ ಮತ್ತು ಗೋಕಾಕ್ ನಗರದಲ್ಲಿ ಇರುವ ಸುಂದೋಲ್ಲಿ ಮಠ ದಾವಾಖಾನೆಯ ಹಿಂದುಗಡೆ ಇರುವ ಅಲೆಮಾರಿ ಜನಾಂಗದವರಿಗೆ ಅನ್ನದಾಸೋಹ ಮಾಡಲಾಯಿತು. ಊಟಕ್ಕೆ ಪಾಯಸ, ಪಲ್ಲೆ, ಹಾಲು, ಅನ್ನ ಮತ್ತು ಸಾಂಬಾರ್ ನೀಡಲಾಯಿತು.