ನವದೆಹಲಿ:ದೆಹಲಿಯಲ್ಲಿ 10 ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗೆ ಲಾಬಿ.ಹಿರಿಯ ಸಚಿವರಿಗೆ ಟೆನ್ಷನ್ ಶುರುವಾಗಿದೆ.ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಂಪುಟದಿಂದ ಹಿರಿಯ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ.ಅಶೋಕ್, ಉಮೇಶ್ ಕತ್ತಿ ಬಳಿಕ ಈಗ ಲಕ್ಷ್ಮಣ್, ಸವದಿ, ಸಿಸಿ ಪಾಟೀಲ್ ಹಾಗೂ ರಾಮುಲು ದೆಹಲಿಗೆ ತೆರಳಲಿದ್ದಾರೆ.
ಸತೀಶ್ ರೆಡ್ಡಿ ವಲ್ಯಾಪುರೆ ಸಹಿತ ಹಲವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದಾರೆ.ಸಂಪುಟದಿಂದ ನಮ್ಮನ್ನೆಲ್ಲಿ ಕೈಬಿಡುತ್ತಾರೋ ಎಂಬ ಆತಂಕದಲ್ಲಿ ಹಲವಾರು ಸಚಿವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದಾರೆ.ಹೊಸ ಶಾಸಕರು ತಮಗೆ ಮಂತ್ರಿ ಪದವಿ ಸಿಗಲಿ ಎಂದು ಭೇಟಿಯಾಗಿದ್ದರೆ, ಇನ್ನೂ ಮಾಜಿ ಸಚಿವರು ತಮ್ಮಲ್ಲೇ ಮಂತ್ರಿಸ್ಥಾನ ಇರಲಿ ಎಂದು ಲಾಬಿ ಮಾಡುತ್ತಿದ್ದಾರೆ. ಸಂಜೆ ಹೊತ್ತಿಗೆ ಸಿಎಂ ರ ಕ್ಯಾಬಿನೆಟ್ ಲೀಸ್ಟ್ ಫೈನಲ್ ಗೆ ತಲುಪಲಿದೆ.