Breaking News

“ಖಾಕಿ” ಭರ್ಜರಿ ಬೇಟೆ: 16 ಲಕ್ಷದ ಚಿನ್ನಾಭರಣ ದೋಚಿದ್ದ ಕಿಡಿಗೇಡಿಗಳು ಅರೆಸ್ಟ್..! ಬಂಧಿತರಿಂದ 11 ಲಕ್ಷ ರೂ. ಮೌಲ್ಯದ 225 ಗ್ರಾಂ ಚಿನ್ನ ವಶ

Spread the love

ಬಾಗಲಕೋಟೆ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ, ಮೂವರು ಕಿಡಿಗೇಡಿಗಳನ್ನು ಮುಧೋಳ “ಖಾಕಿ” ಭರ್ಜರಿ ಭರ್ಜರಿ ಬೇಟೆಯಾಡಿದ್ದಾರೆ.

ಸಿದ್ಧು, ಸಿದ್ದಪ್ಪ ಜಿಮ್ಮಿ, ಅಡಿವೆವ್ವ ಹಾದಿಮನಿ, ಕಲ್ಮೇಶ , ಮಟ್ಯಾ, ಪುಟ್ಯಾ, ಪುಟ್ಟು , ಪುಟ್ಯಾ, ದುರ್ಗಪ್ಪ ರಾನವ್ವಗೋಳ , ಜಾನಮಟ್ಟಿ, ಮುತ್ತಪ್ಪ ಯಮನಪ್ಪ ಪೂಜಾರಿ ಬಂಧಿತ ಆರೋಪಿಗಳು, ಮುಧೋಳ ತಾಲೂಕಿನ ಮಳಲಿ ಗ್ರಾಮದ ಎಂದು ತಿಳಿದು ಬಂದಿದೆ.

ಬಂಧಿತರಿಂದ 11 ಲಕ್ಷ ರೂ. ಮೌಲ್ಯದ 225 ಗ್ರಾಂ ಚಿನ್ನ ಹಾಗೂ 2260 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನ ವಶಕ್ಕೆ ಪಡೆಯಲಾಗಿದೆ. ಕಳ್ಳತನಕ್ಕೆ ಬಳಕೆ ಮಾಡಿದ ಬೈಕ್ ನ್ನ ಜಪ್ತಿ ಮಾಡಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಧೋಲ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್ಐಗಳಾದ ಶಿವಶಂಕರ ಮುಕರಿ, ದಿನೇಶ ಜವಳೇಕರ, ಕೆ.ಬಿ.ಮಾಂಗ್, ಹವಾಲ್ದಾರುಗಳಾದ ಆರ್.ಬಿ.ಕಟಗೇರಿ, ಬಾಹುಬಲಿ ಕುಸನಾಳೆ, ವಿ.ಬಿ.ತೇಲಿ, ಜಗದೀಶ ಕಾಂತಿ, ಬಿ.ಎಸ್.ದಾಸವಗೋಳ, ಪೇದೆಗಳಾದ ಎಂ.ಎನ್.ಮಾಂಗ್, ಸದಾಶಿವ ಬಡಿಗೇರ, ಜೆ.ಸಿ.ದಳವಾಯಿ, ದಾದಾಪೀರ ಅತ್ರಾವತ್ತ, ಮಲ್ಲಿಕಾರ್ಜುನ ತಂಬಾಕದ, ಬಸವರಾಜ ತಂಗಡಿ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ