ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಡಿ ಕೆ ಶಿವಕುಮಾರ್ ಹೇಳಿಕೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ಜೊತೆಗೆ ಸಭೆ ಮಾಡುತ್ತೇನೆ.
ಈಗಾಗಲೇ ರೈತ ನಾಯಕ ಬಾಬಾಗೌಡ ಪಾಟೀಲ್, ಸೇರಿದಂತೆ ಎಲ್ಲರಿಗೂ ಭೇಟಿ ಆಗುತ್ತಿದ್ದೇನೆ..
ಅನೇಕ ಧರ್ಮ ಪೀಠದ ಸ್ವಾಮೀಜಿಗಳಿಗೆ ಭೇಟಿ ಮಾಡಿದ್ದೇನೆ . ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ..
ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ರೂ ಕೇಂದ್ರ ಸರ್ಕಾರ ಅವರು ಜೊತೆಗೆ ಮಾತನಾಡಿಲ್ಲ. ಹೀಗಾಗಿ ರೈತರ ಆಕ್ರೋಶ ಇದೆ..
ಈ ಸರ್ಕಾರಕ್ಕೆ, ಬಿಜೆಪಿ ಅವರಿಗೆ ಒಂದು ಸಂದೇಶ ಕಳಿಸಬೇಕಾಗಿದೆ..
ಬೆಳಗಾವಿ ಲೋಕಸಭಾ, ಮಸ್ಕಿ ಹಾಗೂ ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ಆಕ್ರೋಶ ಇದೆ. ರೈತರ ಭಾವನೆ ಗೆ ಧಕ್ಕೆ ಬಂದಿದೆ..
ಇದನ್ನ ಉಳಿಸಿಕೊಳ್ಳಲು ರೈತರು ಬಿಜೆಪಿ ವಿರೋಧ ಮಾಡುತ್ತಿದ್ದಾರೆ.
ನಮಗೆ ಲಿಂಗಾಯತ, ಮರಾಠಾ ಸೇರಿದಂತೆ ಎಲ್ಲಾ ಸಮುದಾಯದವರು ಒಂದೆ..
ಪ್ರಜಾಪ್ರಭುತ್ವ ದಲ್ಲಿ ಎಲ್ಲಾರೂ ಒಂದೇ. ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ. ನೀತಿ ಮೇಲೆ ರಾಜಕೀಯ ಮಾಡುತ್ತೇವೆ….
ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ನ ಕೊಡುಗೆ ಏನು?
ಜಗದೀಶ್ ಶೆಟ್ಟರ್ ಪ್ರಶ್ನೆ ಗೆ ಡಿಕೆಶಿ ತಿರುಗೇಟು.
ಅವರ ಹೇಳಿಕೆ ಸ್ವಾಗತ ಮಾಡುತ್ತೇವೆ.
ಜಗದೀಶ್ ಶೆಟ್ಟರ್ ಗೆ ಮಾತನಾಡೋಕೆ ಶಕ್ತಿ ಕೊಟ್ಟಿದ್ದೇವೆ.
ಕಾಂಗ್ರೆಸ್ ಪಕ್ಷ ಮುಳುಹುವ ಹಡಗು ಸಿಎಂ ಯಡಿಯೂರಪ್ಪ ಹೇಳಿಕೆಗೆ ಡಿಕೆಶಿ ತಿರುಗೇಟು..
ಕಾಂಗ್ರೆಸ್ ಮುಳುಗುವ ಹಡಗ ಅದ್ರೆ ಕಾಂಗ್ರೆಸ್ ಪಕ್ಷ ಕ್ಕೆ ಎಲ್ಲಾರೂ ಬಂದು ಸೇರುತ್ತಿದ್ದಾರೆ.. ಅದು ಗಮನಕ್ಕೆ ಇರಲಿ..
ಸಾರಿಗೆ ನೌಕರರ ಮುಷ್ಕರ ವಿಚಾರ..
ಸಾರಿಗೆ ನೌಕರರಿಗೆ ಕಾಂಗ್ರೆಸ್ ಬೆಂಬಲ ಸೂಚಿಸುತ್ತದೆ. ಸರ್ಕಾರದ ಅವರು ಜೊತೆಗೆ ನಡೆದುಕೊಳ್ಳುವ ಧೋರಣೆ ಸರಿ ಇಲ್ಲ.. ಅವರು ಜೊತೆಗೆ ಕುಳಿತು ಮಾತನಾಡಬೇಕು.